ಆಳಂದ: ತಾಲೂಕಿನ ಸರಸಂಬಾ ಗ್ರಾಮದಲ್ಲಿ ಇತ್ತೀಚಿಗೆ ಅಳವಡಿಸಿದ್ದ ನೇತಾಜಿ ಸುಭಾಷ್ ಚಂದ್ರ ಭೋಸ್ ಫ್ಲೆಕ್ಸಗೆ ಗ್ರಾಮದ ಕುಮಾರ ಭಕರೆ ಎಂಬಾತ ಮಂಗಳವಾರ ಚಾಕು ಇರಿದಿದ್ದಾರೆ ಚಾಕು ಇರಿದಿರುವ ಆರೋಪಿಯನ್ನು ಬಂಧಿಸಿ ಇದರ ಹಿಂದೆ ಇರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಅನೀಲಕುಮಾರ ಖಾನಾಪುರೆ ಆಗ್ರಹಿಸಿದ್ದಾರೆ.
ಮಾಜಿ ಶಾಸಕ ಬಿ ಆರ್ ಪಾಟೀಲ ಬೆಂಬಲಿಗರು ಸ್ಥಳೀಯ ರಾಜಕಾರಣದ ವಿಷಯವನ್ನು ಇಟ್ಟುಕೊಂಡು ಸ್ವಾತಂತ್ರ ಹೋರಾಟದ ಮಹಾನ ನಾಯಕ ಸುಭಾಷ್ ಚಂದ್ರ ಭೋಸ್ ಫ್ಲೆಕ್ಸ್ಗೆ ಚೂರಿ ಹಾಕಿದ್ದಾರೆ ಇದು ಸ್ವಾತಂತ್ರ್ಯ ಹೋರಾಟದ ಮಹಾನ ನಾಯಕನಿಗೆ ಮಾಡಿದ ಅವಮಾನವಾಗಿದೆ ಅಲ್ಲದೇ ಬಿ ಆರ್ ಪಾಟೀಲ ಬೆಂಬಲಿಗರು ಒಂದು ಫ್ಲೆಕ್ಸ್ನಲ್ಲಿನ ಭಾವಚಿತ್ರವನ್ನು ಸಹಿಸದಷ್ಟು ಅಸಹಿಷ್ಣುಗಳಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಮಾಜಿ ಶಾಸಕ ಬಿ ಆರ್ ಪಾಟೀಲ ಅವರ ಬೆಂಬಲಿಗರಿಂದ ಸರ್ವಾಧಿಕಾರಿ ವರ್ತನೆ ನಡೆಯುತ್ತಿದೆ. ಸಾಮಾನ್ಯ ಜನರ ಹಕ್ಕುಗಳನ್ನು ದಮನಗೊಳಿಸಲಾಗುತ್ತಿದೆ ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಮಾಜಿ ಶಾಸಕ ಬಿ ಆರ್ ಪಾಟೀಲರ ಬೆಂಬಲಿಗರು ಗ್ರಾಮದಲ್ಲಿ ಅರಾಜಕತೆ ನಿರ್ಮಾಣ ಮಾಡುತ್ತಿದ್ದಾರೆ ಸಾರ್ವಜನಿಕ ಸ್ಥಳಗಳಲ್ಲಿ ತಲವಾರ್, ಮಚ್ಚುಗಳಿಂದ ಜನ್ಮ ದಿನದ ಕೇಕ್ ಕಟ್ ಮಾಡಿ ಸಾರ್ವಜನಿಕರಲ್ಲಿ ಭಯ ಮೂಡಿಸುತ್ತಿದ್ದಾರೆ ಹೀಗಾಗಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.