ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್ ನಂ ೯ ರಲ್ಲಿ ಬರುವ ಡಿ.ಕೆ.ಪಾಟೀಲ್ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಯುವ ಮುಖಂಡ ಹಾಗೂ ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ್ ಸಹಯೋಗದಲ್ಲಿ ಬಿಜೆಪಿ ಮಹಾನಗರ ಜಿಲ್ಲೆ ಕಾರ್ಯದರ್ಶಿ ಸಿದ್ದು ಸಂಗೋಳಗಿ ಅವರು ನೇತೃತ್ವದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಸುರೇಶ ಪಾಟೀಲ್, ಡಾ.ಆನಂದ ನಾಯಕ್, ಗ್ರಾಮೀಣ ಸಿಪಿಐ ಬಾಸು ಚವ್ಹಾಣ, ಡಾ.ಅನೀತಾ ಜಾಧವ, ಕುಮಾರ ಪಾಟೀಲ್, ಎಸ್.ಕೆ. ಕುಂಬಾರ, ಬ್ರಹ್ಮಾ ಕೊತಲೆ, ಬಿ.ಎಸ್.ಪಾಟೀಲ್, ಆನಂದ ಚೌವ್ಹಾಣ, ಧನರಾಜ ಹಿಪ್ಪರಗಿ, ಅಶೋಕ ಕಟ್ಟಿಮನಿ, ವಿಜಯ ಕಲಶೆಟ್ಟಿ, ಮಹಾಂತು ಕಲಶೆಟ್ಟಿ, ಅಂಬ್ರಿಷ್ ಕಂಬಾರ, ಶರಣು ಬಿರಾದಾರ, ದತ್ತು ಸುಗಂಧಿ, ಶರಣು ಕಾಂಬಳೆ, ಶಾಮ ಪಾಟೀಲ್, ಸುರೇಶ ಸಾಸನೇಕರ್ ಸೇರಿದಂತೆ ಇನ್ನಿತರರು ಇದ್ದರು.