ಸುರಪುರ: ಕೊರೊನಾ ಲಸಿಕೆ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿಗಳ ತಂಡ ಇಲ್ಲಿಗೆ ಬರಲಿದ್ದು ತಾವೆಲ್ಲರು ತಪ್ಪದೆ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ತಿಳಿಸಿದರು.
ನಗರದ ವಾರ್ಡ್ ಸಂಖ್ಯೆ ೩೦ ಹಾಗು ೩೧ರ ವಣಿಕಿಹಾಳದ ಬಾಳ ಸಂತರ ಏರಿಯಾದಲ್ಲಿ ಶನಿವಾರ ಮದ್ಹ್ಯಾನ ಪ್ರತಿ ಮನೆ ಬಾಗಿಲಿಗೆ ಹೋಗಿ ಕುಟುಂಬ ಸದಸ್ಯರಲ್ಲಿ ಜಾಗೃತಿ ಮೂಡಿಸಿ ಮಾತನಾಡಿ,ಕೊರೊನಾ ಸೊಂಕು ಯಾವಾಗ ಹೇಗೆ ಹರಡುತ್ತದೆ ಎಂದು ಹೇಳಲಾಗದು.
ಆದರೆ ಲಸಿಕೆ ಪಡೆದವರಿಗೆ ಸೊಂಕಿನಿಂದ ಏನು ತೊಂದರೆಯಾಗುವುದಿಲ್ಲ,ಆದ್ದರಿಂದ ಇದೇ ಸೋಮವಾರ ಇಲ್ಲಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಬರಲಿದ್ದು,ಆಗ ಎಲ್ಲರು ತಪ್ಪದೆ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ತಿಳಿಸಿದರು.ಇದಕ್ಕೆ ಸೂಕ್ತವಾಗಿ ಸ್ಪಂಧಿಸಿದ ನಿವಾಸಿಗಳು ಲಸಿಕೆ ಪಡೆಯುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಇಂಜಿನಿಂiiರ್ ಶಿವರಾಜ ನೈರ್ಮಲ್ಯ ಅಧಿಕಾರಿ ಶಿವಪುತ್ರ ನಗರಸಭೆ ಸದಸ್ಯ ಜೆಟ್ಟೆಪ್ಪ ಹಾಗು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರಿದ್ದರು.