ಬಸವೇಶ್ವರ ಪುತ್ಥಳಿ ನಿರ್ಧಾರ ಐತಿಹಾಸಿಕ

0
41

ಆಳಂದ: ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಐತಿಹಾಸಿಕ ನಿರ್ಧಾರ ಕೈಗೊಂಡಿರುವುದಕ್ಕೆ ನಿಂಬರ್ಗಾ ಗ್ರಾಮದ ಬಿ.ಜೆ.ಪಿ ಮುಖಂಡ ಶ್ರೀಶೈಲ ಮಾಲಿಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.

೧೨ನೇ ಶತಮಾನದಲ್ಲಿ ೭೭೦ ಅಮರಗಣಂಗಗಳ ಶರಣ ಪರಿವಾರವನ್ನು ಒಂದೆಡೆ ಅನುಭವ ಮಂಟಪದಲ್ಲಿ ಸೇರಿಸಿ, ಹಲವಾರು ವರ್ಷಗಳ ಕಾಲ ವೈಚಾರಿಕ, ವಚನ ಸಾಹಿತ್ಯ ರಚನೆಯಲ್ಲಿ ತೊಡಗುವಂತೆ ಮಾಡಿ, ಪ್ರತಿಯೊಬ್ಬರು ಸಮಾನತೆ, ಕಾಯಕ, ದಾಸೋಹ ತತ್ವವನ್ನು ರೂಢಿಸಿಕೊಳ್ಳುವಂತೆ ಮಾಡಿದ ಬಸವಣ್ಣನವರ ಕೊಡುಗೆ ಜಗತ್ತಿಗೆ ಮಾದರಿಯಾಗಿದೆ. ಬಸವಣ್ಣನವರ ಪುತ್ಥಳಿಯನ್ನು ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here