ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್ ನಂ ೪೪ರಲ್ಲಿ ಬರುವ ಶಾಂತಿ ನಗರ ಬಡಾವಣೆಯಲ್ಲಿರುವ ಚಾಣಕ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗ ಕಲ್ಯಾಣ ಕರ್ನಾಟಕ ಉಸ್ತುವಾರಿ ಸಚಿನ್ ಶಿರವಾಳ ನೇತೃತ್ವದಲ್ಲಿ ಉಚಿತ ಸಾರ್ವಜನಿಕರಿಗೆ ಕೋವಿಡ ವ್ಯಾಕ್ಸಿನ್ ನೀಡಿ ಬಾದಾಮಿ ಹಾಲು ಹಾಗೂ ಬಿಸಲೇರಿ ನೀರನ್ನು ವಿತರಿಸಲಾಯಿತು.
ಎಂಎಲ್ಸಿ ಅಲ್ಲಮಪ್ರಭು ಪಾಟೀಲ ಹಾಗೂ ದಕ್ಷಿಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಲಕಂಠರಾವ ಮೂಲಗೆ ಜಂಟಿಯಾಗಿ ಕೋವಿಡ ವ್ಯಾಕ್ಸಿನ್ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಜೀವ್ ಐರೇಡ್ಡಿ, ಮುನ್ನಾ ಭಾಯಿ, ಈರಣ್ಣ ಝಳಕಿ, ಅಮರ ಶೀರವಾಳ, ವಾಣಿಶ್ರೀ ಸಗರಕರ್, ಚೇತನ, ದತ್ತಾ, ಮಲ್ಲು, ಸಂತೋಷ ಇದ್ದರು.