ಕಲಬುರಗಿ: ಕರ್ನಾಟಕದ 19 ನೇಯ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿರುವ ಥಾವರ್ ಚಂದ್ ಗೆಹ್ಲೋತ್ ಅವರಿಗೆ ರಾಜ್ಯ ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಅಭಿನಂದಿಸಿದ್ದಾರೆ.
ರಾಜ ಭವನದ ಗಾಜಿನ ಮನೆಯಲ್ಲಿ ನಡೆದ ಪ್ರತಿe್ಞÁ ವಿಧಿ ಸ್ವೀಕಾರದ ವಿಶೇಷ ಸಮಾರಂಭದಲ್ಲಿ ಖುದ್ದು ಪಾಲ್ಗೊಂಡಿದ್ದ ಡಾ. ಅಜಯ್ ಸಿಂಗ್ ಪುಷ್ಪಗುಚ್ಛ ನೀಡಿ ಗೆಹ್ಲೋತ್ ಅವರಿಗೆ ಕೈ ಕುಲುಕಿ ಕರುನಾಡಿನ ರಾಜ್ಯಪಾಲರಾಗಿದ್ದಕ್ಕೆ ಶುಭ ಕೋರಿದರು.