ಕಲಬುರಗಿ: ವಾರ್ಡ್ ನಂಬರ್ ೨೪ರ ಲೋಹರಗಲ್ಲಿ ಮಹಾದೇವ ಮಂದಿರದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ರವರ ನೇತೃತ್ವದ ಹಾಗೂ ಜಿ.ಡಿ. ಅಣಕಲ್ ಅಧ್ಯಕ್ಷತೆಯಲ್ಲಿ ಬಿಜೆಪಿ ಯುವ ನಾಯಕ ಮಂಜುನಾಥ ಅಂಕಲಗಿ ಅವರ ಮುಂದಾಳತ್ವದಲ್ಲಿ ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಅಗತ್ಯ ಆಹಾರ ಸಾಮಗ್ರಿಗಳ ಕೀಟಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಸೋಮಶೇಖರ ಚಿನ್ನಮಳ್ಳಿ, ಸಂತೋಷ ಗಂಗಸಿರಿ, ಶಾಂತಪ್ಪ ಪಾಟೀಲ ಕೊಡ್ಲಹಂಗರಗಾ, ಸಚಿನ್ ಪಾಟೀಲ, ವಿಶ್ವನಾಥ ಗಾಜರೆ, ಅಣವೀರ ಪಾಟೀಲ್, ಶರಣು ಸಜ್ಜನ, ಶರಣು ಹೂಗಾರ, ಮಲ್ಲಿಕಾರ್ಜುನ ಕುಸುನೂರ ಇದ್ದರು.