ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಜಿಲ್ಲಾ ಘಟಕದ ವತಿಯಿಂದ ಇತ್ತಿಚೇಗೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯೂಸ್ ಫಸ್ಟ್ ಚಾನಲ್ ಕ್ಯಾಮರಾ ಮ್ಯಾನ ಗಂಗಾಧರ ಹಿರೇಮಠ ಹಾಗೂ ವಿಜಯ ಕರ್ನಾಟಕ ಕನ್ನಡ ದಿನ ಪತ್ರಿಕೆ ಛಾಯಾಗ್ರಾಹಕ ಶಿವಶರಣ ಬೆಣ್ಣೂರ ರವರಿಗೆ ಉತ್ತಮ ಕ್ಯಾಮರಾಮ್ಯಾನ ಹಾಗೂ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆದಿದ್ದಕ್ಕಾಗಿ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ವತಿಯಿಂದ ಕಲಬುರಗಿಯಲ್ಲಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಶರಣಪ್ಪ ಸಿ. ಬಸವರಾಜ ತೋಟದ, ರಮೇಶ ಗೌಳಿ, ಮಂಜುನಾಥ ಜಂಬಗಿ, ಮೊಹಮ್ಮದ್ ಇಮ್ರಾನ್, ಶಿವಕುಮಾರ್, ವರದಾನ ಗಿಣ್ಣಿ, ಸಂಗಮೇಶ ಗಿಣ್ಣಿ ಇದ್ದರು.