ಹಡಪದ ಸಮಾಜ ಸರ್ವ ಸಮಾಜವನ್ನು ಕಾಳಜಿವಹಿಸುವುದು: ಕಂಬಳೇಶ್ವ ಶ್ರೀಗಳು

0
22

ಚಿತ್ತಾಪುರ: ಸಮಾಜದಲ್ಲಿ ಸರ್ವರನ್ನು ಕಾಳಜಿ ವಹಿಸುವ ಹಾಗೂ ಸಮಾನತೆಯಿಂದ ಕಾಣುದು ಸಮಾಜ ಹಡಪದ ಸಮಾಜವಾಗಿದೆ ಎಂದು ಚಿತ್ತಾಪುರ ಕಂಬಳೇಶ್ವರ ಮಠದ ಪೀಠಾಧಿಪತಿ ಷ.ಬ್ರ.ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದ್ದಾರೆ.

ಶುಕ್ರವಾರ ಪಟ್ಟಣದ ನಿಜ ಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಹಡಪದ(ಕ್ಷೌರಿಕ) ಸಮಾಜದ ವೃತ್ತಿ ಭಾಂದವರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Contact Your\'s Advertisement; 9902492681

ಹಡಪದ ಸಮಾಜವು ತನ್ನ ವೃತ್ತಿಯನ್ನೇ ಆಧಾರವಾಗಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೆ ಕರೋನಾ ಸಂದರ್ಭದಲ್ಲಿ ಅನೇಕ ವರ್ಗದ ಜನರಿಗೆ ತೊಂದರೆ ಆಗಿದೆ ಅಂತೆಯೇ ಹಡಪದ ಸಮಾಜವು ಕೂಡ ತೀರಾ ಸಂಕಷ್ಟವನ್ನು ಎದುರಿಸಿದೆ.ಕ್ಷೌರವನ್ನು ತಮ್ಮ ಮೂಲ ಕೆಲಸ ಎಂದು ಜೀವನ ಮಾಡುತ್ತಿರುವ ಈ ಸಮಾಜಕ್ಕೆ ಆಹಾರ ಕಿಟ್ ವಿತರಣೆ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.
ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿದರು.

ಕ್ಷೇತ್ರದ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಬಡವರ,ದಿನ-ದಲಿತರ ಉದ್ದಾರಕ್ಕೆ ಹೆಗಲುಕೊಟ್ಟು ನಿಂತಿದ್ದಾರೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಹಾಗೂ ಪ್ರಗತಿಪರ ಕೆಲಸಗಳನ್ನು ಮಾಡುತ್ತಾ ಮತಕ್ಷೇತ್ರದ ಚಿತ್ರಣವನ್ನೇ ಬದಲಾವಣೆ ಮಾಡಿ ಕ್ಷೇತ್ರದ ಜನರ ಮನಸ್ಸಲ್ಲಿ ಮನೆ ಮಾತಾಗಿದ್ದರೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಶಿವರುದ್ರಪ್ಪ ಭೀಣಿ,ತಾ.ಪಂ.ಮಾಜಿ ಅಧ್ಯಕ್ಷ ಜಗಣ್ಣಗೌಡ ಪಾಟೀಲ್ ರಾಮತೀರ್ಥ,ಹಣಮಂತ ಸಂಕನೂರ್, ಹಡಪದ ಸಮಾಜ ಜಿಲ್ಲಾಗೌರವ ಅಧ್ಯಕ್ಷ ಬಸವರಾಜ ಸುಗೂರ,ತಾಲೂಕ ಅಧ್ಯಕ್ಷ ರಮೇಶ ಕೊಲ್ಲೂರ್,ಶೇಖರ್ ದಂಡಗುಂಡ, ಮಲ್ಲಿಕಾರ್ಜುನ, ದೇವು ಸಂಕನೂರ್, ಕಲ್ಯಾಣಿ ಗುಂಡಗುರ್ತಿ, ಶಿವಕುಮಾರ ನಾಲವಾರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here