ಚಿತ್ತಾಪುರ:ತಾಲೂಕಿನ ನಾಲವಾರ ಸುಕ್ಷೇತ್ರದ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ದ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 57 ನೇ ವರ್ಷದ ಜನ್ಮದಿನೋತ್ಸವ ನಿಮಿತ್ತ ಗ್ರಾಮದ ಜನಪ್ರಿಯ ಹೇರ್ ಡ್ರೆಸೆಸ್ ವತಿಯಿಂದ ಎರಡನೇ ವರ್ಷದ ಉಚಿತ ಕ್ಷೌರ ಸೇವೆ ನಡೆಸಲಾಯಿತು.
ಕ್ಷೌರ ಸೇವೆಗೆ ಹಡಪದ ಸಮಾಜದ ಜಿಲ್ಲಾ ಅಧ್ಯಕ್ಷರು,ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಈರಣ್ಣ ಹಡಪದ ಸಣ್ಣೂರ ಚಾಲನೆ ನೀಡಿದರು.ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಪೌರ ಕಾರ್ಮಿಕರು,ಕಟ್ಟಡ ಕಾರ್ಮಿಕರು,ವಿಕಲಚೇತನರು,ಸಾಧು-ಸಂತರು,ಬಡ ರೈತರು ಸೇರಿದಂತೆ ಸುಮಾರು 100 ಹೆಚ್ಚು ಜನರಿಗೆ ಹೇರ್ ಕಟಿಂಗ್,ಶೇವಿಂಗ್,ಹೇರ್ ಡ್ರೈ ಮಾಡಲಾಯಿತು.
ಜಿಲ್ಲಾ ಗೌರವ ಅಧ್ಯಕ್ಷ ಬಸವರಾಜ ಹಡಪದ,ಬಿಜೆಪಿ ಯುವ ಮೋರ್ಚಾ ತಾಲೂಕ ಅಧ್ಯಕ್ಷ ಶಿವಕುಮಾರ ಸುಣಗಾರ್,ಸಾಬಣ್ಣಾ ಜಾಲಗರ್,
ಸಿದ್ದು ಹಡಪದ,ದೇವಿಂದ್ರ ಹಡಪದ ಸಂಕನೂರ್,ವಿಶ್ವನಾಥ ಹಡಪದ ಸುಗೂರ ಸೇರಿದಂತೆ ಹಡಪದ ಸಮಾಜದ ಮುಖಂಡರು ಇದ್ದರು.