ಕಲಬುರಗಿ: ನಗರದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಗೋದುತಾಯಿ ಮಹಿಳಾ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗ ಹಾಗೂ ಇನ್ನರ್ ವ್ಹೀಲ್ ಗುಲಬರ್ಗಾ ಸನ್ಸಿಟಿ ಸಂಯುಕ್ತಾಶ್ರಯದಲ್ಲಿ ಅರ್ತ ಕೇರ್ – ಗ್ರೀನ್ ಚಾಂಪಿಯನ್ಸ್ ಆಫ್ ಚೇಂಜ್ ಎಂಬ ವಿಷಯದ ಕುರಿತು ಜರುಗಿದ ಒಂದು ದಿನದ ಕಾರ್ಯಗಾರವನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಸಸಿಗೆ ನೀರೆರೆಯುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಾ. ಪ್ರಭುದೇವ ಎಂ.ಎಸ್, ಗೋದುತಾಯಿ ಮಹಿಳಾ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಶಿಕಲಾ, ಪ್ರೊ. ಶೀತಲ್ ಬಿರಾದರ, ಇನ್ನರ್ ವ್ಹೀಲ್ ಗುಲಬರ್ಗಾ ಸನ್ಸಿಟಿ ಅಧ್ಯಕ್ಷೆ ರಂಜನಿ ಗುಪ್ತಾ, ಕಾರ್ಯದರ್ಶಿ ಪಲ್ಲವಿ ಮುಕ್ಕಾ, ಮಾಜಿ ಅಧ್ಯಕ್ಷೆ ಶ್ವೇತಾ ಎಂ.ಜಿ ಸೇರಿದಂತೆ ಇತರರು ಇದ್ದರು.