ತಿಂಥಣಿ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ

0
8

ಸುರಪುರ: ತಾಲೂಕಿನ ದಕ್ಷಿಣಕಾಶಿ ಸುಕ್ಷೇತ್ರ ತಿಂಥಣಿ ಶ್ರೀ ಜಗದ್ಗುರು ಮೌನೇಶ್ವರ ಕಾರ್ತಿಕೋತ್ಸವ ಕಾರ್ಯಕ್ರಮವು ಇದೇ 9 ರಂದು ಗುರುವಾರ ರಾತ್ರಿ ಕಾರ್ತಿಕೋತ್ಸವ ಜರಗುವುದು.

ಅಂದು ರಾತ್ರಿ ಶ್ರೀ ಸೋಮನಾಥ ಸಂಗೀತಪಾಠ ಶಾಲೆ ಕಕ್ಕೇರಾ ಸಂಗೀತ ಕಾರ್ಯಕ್ರಮವು ಗವಾಯಿಗಳಾದ ಬಸಣ್ಣ ಗುರಿಕಾರ್ ಕಕ್ಕೇರ ಮತ್ತು ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ನಡೆಸಿಕೊಡುವರು.ಅಂದು 10.30 ರಿಂದ ಎಲ್ಲಾ ದೇವರುಗಳಿಗೆ ಪೂಜೆ ಮತ್ತು ನೈವೇದ್ಯ ಕಾರ್ಯಕ್ರಮ ಆನಂತರ ಮಹಾಪ್ರಸಾದ ಜರಗುವುದು.

Contact Your\'s Advertisement; 9902492681

ರಾತ್ರಿ 11:30 ರಿಂದ ಪುರುವಂತರ ಸೇವೆಯು ಇಡೀ ರಾತ್ರಿ ಬೆಳಗಾಗುವವರೆಗೆ ಪುರುವಂತರ ಮಹಾಸೇವ ಜರಗುವುದು. ಶುಕ್ರವಾರ ಬೆಳಗ್ಗೆ ಗುಹಾ ಪ್ರವೇಶ ನಡೆಯುತ್ತದೆ ಈ ಎಲ್ಲಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಭಕ್ತರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here