ಸುರಪುರ: ಟ್ರ್ಯಾಕ್ಟರ್ ಕಾಲುವೆಗೆ ಬಿದ್ದು ಚಾಲಕ ಸಾವು

0
13

ಸುರಪುರ: ಮರಳು ತರಲು ಹೋಗಿ ಟ್ರ್ಯಾಕ್ಟರ್ ಅಪಘಾತವಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.

ತಾಲೂಕಿನ ಗುಡಿಹಾಳ ಜೆ ಗ್ರಾಮದ ಮಂಜುನಾಥ ಎನ್ನುವ ೨೪ ವರ್ಷದ ಯುವಕ ಕುಂಬಾರಪೇಟೆಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ,ಮಾಲೀಕರು ಮಂಗಳವಾರ ರಾತ್ರಿ ಶೆಳ್ಳಗಿ ಹಳ್ಳದಿಂದ ಮರಳು ತರಲು ಹೇಳಿದ್ದರಿಂದ ಮರಳು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಮರಳಿ ಕುಂಬಾರಪೇಟೆಗೆ ಬರುವ ಸಂದರ್ಭದಲ್ಲಿ ಕವಡಿಮಟ್ಟಿ ಬಳಿಯಲ್ಲಿನ ಕೃಷಿ ಸಂಶೋಧನಾ ಕೇಂದ್ರ ಹತ್ತಿರವಿರುವ ಕಾಲುವೆಗೆ ಮಗುಚಿ ಬಿದ್ದಿದೆ.ರಾತ್ರಿ ವೇಳೆಯಲ್ಲಿ ಮರಳು ತರಲು ಕಳುಹಿಸಿದ್ದರಿಂದ ನಮ್ಮ ತಮ್ಮ ಮಂಜುನಾಥ ಅಸುರಕ್ಷತೆಯಿಂದ ಟ್ರ್ಯಾಕ್ಟರ್ ಚಲಾಯಿಸಿದ್ದಕ್ಕೆ ಅಪಘಾತವಾಗಿ ಸಾವನ್ನಪ್ಪಿದ್ದಾನೆ ಎಂದು ಮೃತ ಮಂಜುನಾಥನ ಅಣ್ಣ ದೇವಪ್ಪ ಎನ್ನುವವರು ಸುರಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Contact Your\'s Advertisement; 9902492681

ಅಪಘಾತದ ಸುದ್ದಿ ತಿಳಿದು ಪೊಲೀಸ್ ಇನ್ಸ್ಪೇಕ್ಟರ್ ಸುನೀಲಕುಮಾರ ಮೂಲಿಮನಿಯವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.ನಂತರ ಶವವನ್ನು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.ಆಸ್ಪತ್ರೆ ಬಳಿಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here