ಚಿತ್ತಾಪುರ: ತಾಲೂಕಿನ ಹಲಕಟ್ಟಿ ಗ್ರಾಮದ ಗುರೂಜಿ ನಗರ ಮತ್ತು ಆರ್ ಬಿ ನಗರ ಉದ್ದೇಶಿಸಿರುವ ಕೇಂದ್ರ ಸರ್ಕಾರದ ಜಲ ಜೀವನ್ ಮಷೀನ್ 2021-22ನ ಮನೆ ಮನೆ ಮೂಲಕ ನೀರು ಪೂರೈಕೆಯನ್ನು ಹಿಂತೆಗೆದುಕೊಂಡು ಈ ಯೋಜನೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದರು.
SUCI C ಹಾಗೂ ರೈತರ ಕೃಷಿ ಕಾರ್ಮಿಕ (RKS) ಸಂಘಟನೆಯು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು ಈ ಸಮಯದಲ್ಲಿ SUCI ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಸದಸ್ಯರಾದ ಮಲ್ಲಿನಾಥ ಹುಂಡೆಕಲ್ ಹಾಗೂ ರೈತ ಕೃಷಿ ಕಾರ್ಮಿಕ ಸಂಘಟನೆಯ ಸಂಚಾಲಕರಾದ ಶಿವಕುಮಾರ್ ಆಂದೋಲಾ ಹಾಗೂ ಚೌಡಪ್ಪ ಗಂಜಿ, ದಶರಥ್ ರಾಥೋಡ್, ಅಲಿಂ ಗಂವ್ಹಾರ, ಮೆಹಬೂಬ್, ಹಾಗೂ ಗ್ರಾಮಸ್ಥರು ಇದ್ದರು.