ಕಲಬುರಗಿ: ಪೋಲಿಸ್ ಇಲಾಖೆ ಅಂದರೆ ಕೇವಲ ಅರಿವು ಮೂಡಿಸುವ ಕಾಯ೯ವಾಗಿದೆ ಹೀಗಾಗಿ ಪೋಲಿಸ ಇಲಾಖೆ ಎಂದರೆ ಯಾರಲ್ಲಿಯೂ ಭಯವಿರಬಾರದು ಎಂದು ನೂತನವಾಗಿ ಅಧಿಕಾರ ವಹಿಸಿಕೊಂಡ ಚೌಕ ಪೋಲಿಷ್ ಠಾಣೆಯ ಪಿಎಸ್ಐ. ಬಸವರಾಜ ಮಂಜಾಳಕರ್ ಹೇಳಿದರು.
ಅವರು ನಗರದ ಶಹಾಬಜಾರದ ಲಾಲ್ ಹನುಮಾನ ಮಂದಿರದ ಬಳಿ ರೇವಣಸಿದ್ಧ ಪಟ್ಟಣ ಹಾಗೂ ಹಿರಾ ಮಕ್ಕಳರ್ ನೇತೃತ್ವದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಜಿ ಮಾತನಾಡಿ. ಅನ್ಯಾಯಧ ವಿರುದ್ಧ ಧ್ವನಿ ಎತ್ತುವ ಮೂಲಕ ಫೋಲಿಸ ಇಲಾಖೆ ಸಮಾಜದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಭುಲಿಂಗ ಹಾದಿಮನಿ, ಚಂದ್ರಕಾಂತ ಹಂಗರಗಿ, ರಾಜಕುಮಾರ್ ಎಂಪುರೆ, ಕಿಶೋರ ಆರಾಧೆ. ಶ್ರೀ ಮಂತ ಗುತ್ತೇದಾರ, ಶಿವು ಸ್ವಾಮಿ, ಸಚಿನ ಕಡಗಂಚಿ, ಸಂಜು ಮಂಜಾಳಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.