ದಲಿತ ಜನಜಾಗೃತಿ ಸಂಘರ್ಷ ಸಮಿತಿಯಿಂದ ಸನ್ಮಾನ

0
19

ಕಲಬುರಗಿ: ನಗರದ ಕನ್ನಡಭವನದಲ್ಲಿ ಕರ್ನಾಟಕ ದಲಿತ ಜನಜಾಗೃತಿ ಸಂಘರ್ಷ ಸಮಿತಿ ವತಿಯಿಂದ ದಲಿತ ಚಳುವಳಿಯ ಸಂಸ್ಥಾಪಕ ಪೊ. ಬಿ.ಕೃಷ್ಣಪ್ಪ ಅವರ ೮೫ನೇ ಜನ್ಮೋತ್ಸವ ಅಂಗವಾಗಿ ಸರ್ಕಾರಿ ನೌಕರರ ಪದೋನ್ನತಿ ಪಡೆದವರಿಗೆ ಸನ್ಮಾನಿಸಿ ಹಾಗೂ ದಲಿತ ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ೨೦೨೧-೨೨ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ,  ಸಮಿತಿಯ ರಾಜ್ಯ ಸಮಚಾಲಕ ರುಕ್ಕಪ್ಪ ಕಾಂಬಳೆ, ಡಾ.ಸುನಿಲಕುಮಾರ ಒಂಟಿ, ಮೋನಪ್ಪ ಎಂ.ಬಿ, ಗುರು ಭಂಡಾರಿ, ಬಸವರಾಜ ಸದಲಾಪುರ, ಶರಣಬಸವ ಹೊಸಮನಿ, ಡಾ.ಕವಿತಾ ಕಾಂಬಳೆ, ಮಲ್ಲಿಕಾರ್ಜುನ ಕಾಳಗಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here