ಅ.೨೯.ರಂದು ಮಡಿವಾಳ ಮಾಚಿದೇವರ ಸಮುದಾಯ ಭವನ ಅಡಿಗಲ್ಲು ಸಮಾರಂಭ

0
9

ಕಲಬುರಗಿ: ಗಣೇಶ ನಗರದಲ್ಲಿರು ೨ ನೇ ಹಂತ ಕೆ.ಜಿ.ಪಿ. ಶಾಲೆ ಹಿಂದುಗಡೆ ಶರಣ ವಚನ ಸಾಹಿತ್ಯ ರಕ್ಷಕ ವೀರಗಣಾಚಾರಿ ಮಡಿವಾಳ ಮಾಚಿದೇವರ ಸಮುದಾಯ ಭವನ ಅಡಿಗಲ್ಲು ಸಮಾರಂಭ ಅಗಸ್ಟ್ ೨೯ ರಂದು ಸೋಮವಾರ ಬೆಳ್ಳಿಗೆ ೧೦. ಗಂಟೆಗೆ ನಡೆಯಲಿದೆ.

ಮಹಾಸಂಸ್ಥಾನ ಮಠ ಚಿತ್ರದುರ್ಗದ ಜಗದ್ದುಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು, ಬಿದ್ದಾಪೂರ ಕಾಲೋನಿ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಶ್ರೀ ಪ್ರಭು ತಾಯಿ ಸಾನಿಧ್ಯ ವಹಿಸುವರು, ಶಾಸಕಿ ಖನೀಜ್ ಪಾತಿಮಾ ಅವರು ಮಡಿವಾಳ ಮಾಚಿದೇವರ ಸಮುದಾಯ ಭವನ ಅಡಿಗಲ್ಲು ಸಮಾರಂಭ ಉದ್ಘಾಟಿಸುವರು, ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ವಿಠ್ಠಲ ಮಡಿವಾಳ ದುದನಿ ಅಧ್ಯಕ್ಷತೆ ವಹಿಸುವರು.

Contact Your\'s Advertisement; 9902492681

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳು, ಗಣ್ಯ ವ್ಯಕ್ತಿಗಳು, ಮಠಾಧೀಶರು ಹಾಗೂ ಭಕ್ತರು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಅನೇಕ ಸಂಸ್ಕೃತಿಕ ಚಟುವಟಿಕೆಗಳು, ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ಮಡಿವಾಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಮಡಿವಾಳ ಖೇಣಿರಂಜೋಳ ಅವರು ಪ್ರಕಟಣೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here