ಕಲಬುರಗಿ: ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ 2010ನೇ ಬ್ಯಾಚಿನಐ.ಎ.ಎಸ್. ಅಧಿಕಾರಿ ಕೃಷ್ಣ ಬಾಜಪೇಯಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಹುದ್ದೆ ನಿರೀಕ್ಷಣೆಯಲ್ಲಿದ್ದಇವರನ್ನು ಪ್ರಾದೇಶಿಕ ಆಯುಕ್ತರನ್ನಾಗಿ ವರ್ಗಾವಣೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಗುರುವಾರಆದೇಶ ಹೊರಡಿಸಿತ್ತು. ಎಲೆಕ್ಟ್ರಿಕಲ್ಇಂಜಿನೀಯರ್ ಪದವೀಧರರಾಗಿರುವಕೃಷ್ಣ ಬಾಜಪೇಯಿ ಅವರು ಮೂಲತಉತ್ತರ ಪ್ರದೇಶದವರಾಗಿದ್ದಾರೆ.ಇ-ಗವರ್ನೆನ್ಸ್ ನಿರ್ದೇಶಕ, ಹಾವೇರಿಜಿಲ್ಲಾಧಿಕಾರಿ ಹಾಗೂ ವಾಯವ್ಯಕರ್ನಾಟಕರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿಕಾರ್ಯನಿರ್ವಹಿಸಿದ್ದಾರೆ.
ಆರ್.ವೆಂಕಟೇಶಕುಮಾರ್ಅವರ ವರ್ಗಾವಣೆಯಿಂದತೆರವಾಗಿದ್ದಕಲ್ಯಾಣಕರ್ನಾಟಕ ಪ್ರದೇಶಅಭಿವೃದ್ಧಿ ಮಂಡಳಿ (ಕೆ.ಕೆ.ಆರ್.ಡಿ.ಬಿ) ಕಾರ್ಯದರ್ಶಿ ಹುದ್ದೆಗೂಕೃಷ್ಣ ಬಾಜಪೇಯಿಅವರನ್ನು ಸರ್ಕಾರ ಹೆಚ್ಚುವರಿ ಪ್ರಭಾರದಲ್ಲಿರಿಸಿರುವ ಕಾರಣಕೆ.ಕೆ.ಆರ್.ಡಿ.ಬಿ. ಕಚೇರಿಯಲ್ಲಿ ಕಾರ್ಯದರ್ಶಿ ಹುದ್ದೆಯ ಪ್ರಭಾರ ಸಹ ವಹಿಸಿಕೊಂಡರು.ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷದತ್ತಾತ್ರೇಯ ಪಾಟೀಲ ರೇವೂರಅವರು ಹೂಗುಚ್ಛ ನೀಡಿ ಶುಭಕೋರಿದರು.