ಭಾಲ್ಕಿ ತಾಲ್ಲೂಕು ಮಟ್ಟದ ವಚನ ಭಾಷಣ ಸ್ಪರ್ಧೆ

0
7

ಭಾಲ್ಕಿ: ವಿಶ್ವಬಸವ ಧರ್ಮ ಟ್ರಸ್ಟ್, ಅನುಭವಮಂಟಪ ಬಸವಕಲ್ಯಾಣ ಆಶ್ರಯದಲ್ಲಿ ಹಮ್ಮಿಕೊಂಡ 43ನೇ ಶರಣ ಕಮ್ಮಟ ಅನುಭವಮಂಟಪ ಉತ್ಸವ ಆಚರಣೆ ಅಂಗವಾಗಿ 13 ರವಿವಾರ ಬೆಳಿಗ್ಗೆ 10-00 ಗಂಟೆಗೆ ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಭಾಲ್ಕಿ ತಾಲೂಕು ಮಟ್ಟದ “ವಚನ ಭಾಷಣ ಸ್ಪರ್ಧೆ” (ಶರಣರ ಒಂದು ವಚನ ಹೇಳಿ ಅದರ ವಿವರಣೆ ನೀಡುವುದು) ಆಯೋಜಿಸಲಾಗಿದೆ.

ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಸ್ಪರ್ಧೆಯ ವಿವರ ಮಾಹಿತಿ ನೀಡುವ ಕರಪತ್ರ ಭಾಲ್ಕಿ ತಾಲೂಕಿನ ಎಲ್ಲಾ ಪ.ಪೂ ಕಾಲೇಜುಗಳಿಗೆ ಕಳಿಸಲಾಗಿದೆ. ಆಯಾ ಪ.ಪೂ. ಕಾಲೇಜಿನ ಭಾಷಣ ಮಾಡುವ ಕಲೆಯುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳ ಹೆಸರು ಕೆಳಕಂಡವರಲ್ಲಿ ನ-10 ರಿಂದ ನೋಂದಣಿ ಮಾಡಿಸಬಹುದಾಗಿದೆ.

Contact Your\'s Advertisement; 9902492681

ಸಕಾಲಕ್ಕೆ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಲು ಆ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ಸಹಿ ಮಾಡಿದ ಪತ್ರದೊಂದಿಗೆ ಕಳಿಸಬೇಕು ಎಂದು ವಚನ ಭಾಷಣ ಸ್ಪರ್ಧೆ ಕಮೀಟಿ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಪ್ರೊ.ಶಂಭಲಿಂಗ ಕಾಮಣ್ಣ ಮೊ: 9448585336, ವೀರಣ್ಣ ಕುಂಬಾರ ಮೊ: 9242777978.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here