ಕಲಬುರಗಿ: ಜಿಲ್ಲೆಯ ಅಫಜಲಪೂರ ತಾಲೂಕಿನ ಚಿನಮಳ್ಳಿ ಗ್ರಾಮದ ಆರಾಧ್ಯ ದೈವ ಅಭಿನವ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವನ್ನು ನಡೆಯಲಿದೆ.
ಜ. 14 ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಗ್ರಾಮದ ಎಡದಂಡೆಯಲ್ಲಿರುವ ಭೀಮಾ ನದಿಯಿಂದ 108 ಮುತೈದೆಯರಿಂದ ಕುಂಬಮೇಳವನ್ನು ಭಾಜಿ, ಭಜಂತ್ರಿ. ಡೊಳ್ಳು ಕುಣಿತ ಹಾಗೂ ಪಟಾಕಿ ಸಿಡಿಸುವುದರೊಂದಿಗೆ ಶ್ರೀ ಮಲ್ಲಿಕಾರ್ಜುನ ದೇವಾಸ್ಥಾನದವೆಗೆ ಕುಂಭ ಮೇಳದ ಮೆರವಣಿಗೆಯನ್ನು ಶ್ರೀ ಮಲ್ಲಿಕಾರ್ಜುನ ಅಪ್ಪಟ ಭಕ್ತ ಹಾಗೂ ಶ್ರೀ ವಿಜಯಲಕ್ಷ್ಮೀ ಹಿರೋ ಹೋಂಡಾ ಸರ್ವಿಸ್ ಸೆಂಟರ್ ಮಾಲೀಕರಾದ ಅಂಬಾರಾಯ ತಂ. ಶರಣಪ್ಪಾ ಪರಸ್ತಿ(ಪಟ್ಟಣ) ಅವರ ನೇತೃತ್ವದಲ್ಲಿ ಜರುಗಲಿದೆ.
ಜ.14 ಮತ್ತು 15 ರಂದು 15 ಎರಡು ದಿನಗಳು ಹಲವಾರು ಗ್ರಾಮಗಳಿಂದ ದೇವರ ದರ್ಶನಕ್ಕೆ ಆಗಮಿಸಿದ ಸಾವೀರಾರು ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆಯನ್ನು ಅಂಬಾರಯ ಪರಸ್ತಿ ಕುಟುಂಬದವರಿಂದ ನೇರವೇರಲಾಗುವುದು ಎಂದು ತಿಳಿಸಿದ್ದಾರೆ.