ಕಲಬುರಗಿ: ಹಿಂಗಾರು ಬೆಳೆ ಕುಸುಬೆ ಕಲಬುರಗಿಜಿಲ್ಲೆಯಲ್ಲಿ ಈ ವರ್ಷಕ್ಷೇತ್ರ ಹೆಚ್ಚಾಗಿದ್ದು ಕುಸುಬೆ ಬೆಳೆಯ ತಳಿ ಗುಣಲಕ್ಷಣ, ಬೆಳೆಯ ಪೋಷಕಾಂಶ, ಕೀಟರೋಗ ಹತೋಟಿ, ಒಣ ಸನ್ನವೇಶ ಮತ್ತು ನೀರಾವರಿಯಲ್ಲಿ ಬೆಳಿಯ ಬೆಳವಣಿಗೆ ಮತ್ತು ಇಳುವರಿ ಪ್ರಾತ್ಯಕ್ಷಿಕೆ, ಎಣ್ಣೆಉತ್ಪಾದನೆ, ಹಿಂಡಿಉಪಯೋಗ, ಕುಸುಬೆ ಮೌಲ್ಯವರ್ಧನೆ ಮತ್ತು ಕುಸುಬೆ ಎಣ್ಣೆ ಮಾರುಕಟ್ಟೆ ಸಮಗ್ರ ಮಾಹಿತಿ ಯುಳ್ಳ ಕುಸುಬೆ ಬೆಳೆ ಕ್ಷೇತ್ರ ಪಾಠಶಾಲೆಯನ್ನು ಆಳಂದ ತಾಲೂಕಿನ ಸುಂಟನೂರುಗ್ರಾಮದರೈತರಾದ ಸುನಿಲ್ ಹಾಗೂ ಬಾಬುರಾವ ಕುಸುಬೆ ಹೊಲದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನಕೇಂದ್ರ, ಕಲಬುರಗಿಯ ಮುಖ್ಯಸ್ಥರಾದ ಡಾ ರಾಜು ಜಿ. ತೆಗ್ಗಳ್ಳಿ, ಸಸ್ಯರೋಗ ತಜ್ಞರಾದ ಡಾ.ಜಹೀರ್ಅಹೆಮದ್, ಕ್ಷೇತ್ರ ಸಹಾಯಕರಾದ ನಿರಂಜನಧನ್ನಿ, ಸೈದಪ್ಪಾ ನಾಟಿಕಾರ್, ಸುಂಟನೂರ್ ಗ್ರಾಮz Àರೈತರು ಪಾಲ್ಗೊಂಡು ಮಾಹಿತಿ ಮತ್ತು ಚರ್ಚೆ ನಡೆಸಿದರು.