ಸುರಪುರ:ನಗರದ ರಿಕ್ರಿಯೇಷನ್ ಕ್ಲಬಾ ಆವರಣದಲ್ಲಿ ಪ್ರತಿಷ್ಠಾಪಿಸಲಿರುವ ಸಾಂಸ್ಕøತಿಕ ರಾಯಬಾರಿ ಎಂದು ಎಲ್ಲರು ಪ್ರೀತಿಯಿಂದ ಕರೆಯುತ್ತಿದ್ದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರ ಪುತ್ಥಳಿಯನ್ನು ಅದ್ಧೂರಿ ಮೆರವಣಿಗೆ ಮೂಲಕ ಕರೆತರಲಾಯಿತು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣ ದಿಂದ ಆರಂಭಗೊಂಡ ಪುತ್ಥಳಿಯ ಮೆರವಣಿಗೆಗೆ ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಪುತ್ಥಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ರಾಜಾ ಮದನಗೋಪಾಲ ನಾಯಕ ಅವರ ಸುಪುತ್ರ ರಾಜಾ ಹರ್ಷವರ್ಧನ ನಾಯಕ,ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಅವರು ಉಪಸ್ಥಿತರಿದ್ದರು.
ನಂತರ ಕುದುರೆ ಸಾರೋಟಿನಲ್ಲಿ ನಡೆದ ಮೆರವಣಿಗೆಯು ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತ,ದರಬಾರ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ಮೂಲಕ ರಿಕ್ರಿಯೇಷನ್ ಕ್ಲಬ್ (ಗರುಡಾದ್ರಿ ಕಲಾ ಮಂದಿರ) ಆವರಣದ ವರೆಗೆ ನಡೆಸಲಾಯಿತು.ಮೆರವಣಿಗೆಯಲ್ಲಿ ವಿವಿಧ ಕಲಾ ಮೇಳಗಳು ಭಾಗವಹಿಸಿದ್ದವು,ಅಲ್ಲದೆ ಶಾಲಾ ಮಕ್ಕಳಿಂದ ಲೇಜಿಮ್,ಕೋಲಾಟ ಹಾಗೂ ವಾದ್ಯಗಳ ಮೇಳ ಮೆರವಣಿಗೆಯ ಮೆರಗು ಹೆಚ್ಚಿಸಿದ್ದವು.
ಮೆರವಣಿಗೆಯಲ್ಲಿ ಮುಖಂಡರಾದ ರಾಜಾ ಪಾಮ ನಾಯಕ,ರಾಜಾ ಹನುಮಪ್ಪ ನಾಯಕ (ತಾತಾ),ಡಾ:ಸುರೇಶ ಸಜ್ಜನ್,ಬಸವಲಿಂಗಪ್ಪ ಪಾಟೀಲ್,ರಾಕೇಶ ಹಂಚಾಟೆ, ಕಿಶೋರ ಚಂದ್ ಜೈನ್,ಪ್ರಕಾಶ ಸಜ್ಜನ್,ಅರವಿಂದ ಕುಮಾರ,ಜಿ.ಎಸ್.ಪಾಟೀಲ್,ಪ್ರಕಾಶ ಗುತ್ತೇದಾರ,ಗೋಪಣ್ಣ ದೊಡ್ಮನಿ, ರಾಜಾ ರಂಗು ನಾಯಕ,ರಾಜಾ ವಿಜಯವರ್ಧನ ನಾಯಕ,ಬಸವರಾಜ ಜಮದ್ರಖಾನಿ,ಜೆ.ಅಗಷ್ಟಿನ್,ನರಸಿಂಹಕಾಂತ ಪಂಚಮಗಿರಿ,ಶಂಕರ ನಾಯಕ,ಸೋಮನಾಥ ಡೊಣ್ಣಿಗೇರ,ಪ್ರಕಾಶ ಅಂಗಡಿ,ಮಂಜುನಾಥ ಜಾಲಹಳ್ಳಿ,ಶರಣಬಸಪ್ಪ ಯಾಳವಾರ ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿದ್ದರು.