ಚಿಂಚೋಳಿ; ವಿಧಾನಸಭಾ ಮತ ಕ್ಷೇತ್ರದ ಕಾಳಗಿ ಮತ್ತು ಕೊಡ್ಲಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಅಣವೀರಯ್ಯ ಪ್ಯಾಟಿಮನಿ ಆಯ್ಕೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎಂಬಿ ಪಾಟೀಲ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಗದೇವ್ ಗುತ್ತೇದಾರ್ ಹಾಗೂ ಚಿಂಚೋಳಿ ಮತಕ್ಷೇತ್ರದ ಅಭ್ಯರ್ಥಿಯಾದ ಸುಭಾಷ್ ರಾಠೋಡ್ ಸಿಫಾರಸ್ಸಿನ ಮೇರೆಗೆ ಮೇರೆಗೆ ಕಾಳಗಿ ಹಾಗೂ ಕೊಡ್ಲಿ ಬ್ಲಾಕ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಅಣವೀರಯ್ಯ ಪ್ಯಾಟಿಮನಿ ಯವರಿಗೆ ಆಯ್ಕೆ ಮಾಡಲಾಯಿತು .
ಈ ಸಂದರ್ಭದಲ್ಲಿ ಚಿಂಚೋಳಿ ಕಾಂಗ್ರೆಸ್ ಮುಖಂಡರಾದ ಸುಭಾಷ್ ರಾಠೋಡ್ ಬಸವರಾಜ್ ಮಲಿ. ದೇವಿಂದ್ರಪ್ಪ ಸಾಲೊಳಿ. ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಯುವ ನಾಯಕರು ಹಾಲಿ ಮಾಜಿ ಚುನಾಯಿತ ಪ್ರತಿನಿಧಿಗಳು ವಿವಿಧ ಘಟಕದ ಅಧ್ಯಕ್ಷರು ಪ್ರತಿನಿಧಿಗಳು ಮತ್ತು ಪಕ್ಷದ ಪದಾಧಿಕಾರಿಗಳು. ಕೊಡ್ಲಿ ಗ್ರಾಮದ ಪ್ರಮುಖ ನಾಯಕರು ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.