ಕಲಬುರಗಿ: ಕತ್ತಲು ಕವಿದಂತಿರುವ ಇಂದಿನ ಸಮಾಜವನ್ನು ಸಮಾನತೆ, ಸೌಹಾರ್ದತೆ ಮತ್ತು ಸಮೃದ್ಧಿಯ ಬೆಳಕಿನೆಡೆಗೆ ಕೊಂಡೊಯ್ಯಲು ಬಸವಾದಿ ಶರಣರ ಚಿಮತನೆಗಳಿಮದ ಮಾತ್ರ ಸಾಧ್ಯವೆಂಬ ಆಶಯದೊಮದಿಗೆ ಇಂದಿನ ಎಳೆಯ ಮನಸ್ಸಿನಲ್ಲಿ ಶರಣ ಸಂಸ್ಕøತಿಯನ್ನು ಬಿತ್ತುವ ಉದ್ದೇಶದಿಂದ ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ `ಬಸವ ಉತ್ಸವ-2023′ ದ ಪ್ರಯುಕ್ತ ವಚನಾಧಾರಿತ ವಿವಿಧ ಸ್ಪರ್ಧೆಗಳನ್ನು ಇದೇ 20 ರ ಸಾಯಂಕಾಲ 4 ಗಂಟೆಗೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಮಕ್ಕಳಿಗಾಗಿ ವಚನ ಕಂಠಪಾಠ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ವಚನ ರಸಪ್ರಶ್ನೆ ಸ್ಪರ್ಧೆ, ಭಾಷಣ ಸ್ಪರ್ಧೆ, ಮಹಿಳೆಯರಿಗಾಗಿ ಚುಕ್ಕಿ ರಂಗೋಲಿ ಸ್ಪರ್ಧೆ, ವಚನ ವ್ಯಾಖ್ಯಾನ ಸ್ಪರ್ಧೆ ಸೇರಿದಂತೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಚಾಲಕರಾದ ಶಿಲ್ಪಾ ಜೋಶಿ – ಮೊ.83105 84131 – ಶಿವರಾಜ ಅಂಡಗಿ- ಮೊ. 99864 20656 ಗೆ ಸಂಪರ್ಕಿಸಬಹುದು.