ಚಿತ್ತಾಪುರ ಜನರು ಭಯದಿಂದ ಬದುಕುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ

0
26

ಕಲಬುರಗಿ: ತಾನು ದಾದಾಗಿರಿ ಶುರು ಮಾಡಿದರೆ ಕಾಂಗ್ರೆಸ್ ನವರು ಮನೆಯಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳುತ್ತಾನೆ. ನೀನು ದಾದಾಗಿರಿ ಮಾಡುತ್ತಿದ್ದೀಯಾ ಅಂತ ತಾನೆ ನಿನ್ನ ಮೇಲೆ 40 ಕೇಸು ಬಿದ್ದಿವೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಶಾಸಕ‌ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಪುಟ್ಟ ಬಾಲಕನೊಬ್ಬ ತಾನು ಕೂಡಿಟ್ಟಿದ್ದ ಹಣವನ್ನು ಪಕ್ಷಕ್ಕಾಗಿ ಬಳಸಿಕೊಳ್ಳಿ ಎಂದು ಶಾಸಕರಿಗೆ ನೀಡಿದ. ಆಗ ಪ್ರತಿಕ್ರಿಯಿಸಿದ ಪ್ರಿಯಾಂಕ್ ಆತನ ಪ್ರೀತಿಗೆ ತಾವು ಮಾರುಹೋಗಿದ್ದಾಗಿ ಹೇಳಿ ಸದರಿ ಹಣವನ್ನು ಆತನ ಶಿಕ್ಷಣಕ್ಕೆ ಬಳಸಿಕೊಳ್ಳಿ ಎಂದು ಆತನ ಪೋಷಕರಿಗೆ ಹೇಳಿದರು.

ಪೇಠ ಶಿರೂರು ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ ಚಿತ್ತಾಪುರದಲ್ಲಿ ಚುನಾವಣೆ ನಡೆಯುತ್ತಿದೆ ಎನಿಸುತ್ತಿಲ್ಲ ಬದಲಿಗೆ ಜನರು ಭಯದಿಂದ ಜೀವಿಸುತ್ತಿದ್ದಾರೆ ಎನಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಪೌಷ್ಠಿಕಾಂಶ ಹೊಂದಿದ ಮಕ್ಕಳಿಗಾಗಿ ವಿತರಿಸಲು ಉದ್ದೇಶಿಸಿದ ಹಾಲಿನ ಪುಡಿ ಕಳ್ಳತನ ಮಾಡಿ ಸಾಗಾಣಿಕೆ ಮಾಡಿದ್ದ ಆರೋಪ ಸಾಬೀತಾಗಿದ್ದರಿಂದ ಯಾದಗಿರಿ ಕೋರ್ಟ್ ಶಿಕ್ಷೆ ವಿಧಿಸಿದೆ ಅಂತವನಿಗೆ ಬಿಜೆಪಿಗರು ಟಿಕೇಟ್ ನೀಡಿದ್ದಾರೆ ಅವರಿಗೆ ನಾಚಿಕೆಯಾಗುವುದಿಲ್ಲವೇ? ಎಂದರು.

ಅವನಿಗೆ MLA ಎಂದರೆ ಅರ್ಥ ಗೊತ್ತಿಲ್ಲ. ಪೇಠ ಶಿರೂರು ಯಾವ ಪಂಚಾಯತ ನಲ್ಲಿ ಬರುತ್ತದೆ ಗೊತ್ತಿಲ್ಲ. ಅವನಿಗೆ ಕನ್ನಡ, ಹಿಂದಿ, ಗೋರಮಾಟಿ ಯಾವ ಭಾಷೆಯೂ ಬರಲ್ಲ. ಇಂಗ್ಲೀಷ್ ಬರುತ್ತೋ ಏನೋ ನನಗೆ ಗೊತ್ತಿಲ್ಲ ಎಂದು ತಟ್ಟನೆ ಕೇಳಿನೋಡಿ ಅವನಿಗೆ ಉತ್ತರ ಗೊತ್ತಿಲ್ಲ ಎಂದು ಛೇಡಿಸಿದರು.

ಅಭಿವೃದ್ಧಿ, ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ನನ್ನನ್ನು ಆಯ್ಕೆ ಮಾಡಿ. ಢಾಬಾ,‌ಜೈಲು‌ ಹಾಗೂ ಬೇಲ್ ಬೇಕಾದರೆ ಅವನನ್ನು ಆಯ್ಕೆ ಮಾಡಿ ಎಂದರು.

ಶರಣಗೌಡ ಮಾಲೀಪಾಟೀಲ, ಶಿವಯ್ಯ ಗುತ್ತೇದಾರ, ಭೀಮಣ್ಣ ಸಾಲಿ, ಯೂಸೂಫ್ ಸಾಬ್ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here