ರಾಮಲಿಂಗೇಶ್ವರ ದೇವಸ್ಥಾನ: ಟಿನ್ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ

0
18

ಶಹಾಬಾದ :ತಾಲೂಕಿನ ಭಂಕೂರ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಟಿನ್ ಶೆಡ್ ನಿರ್ಮಾಣ ಕಾಮಗಾರಿಗೆ ಭಂಕೂರ ಗ್ರಾಪಂ ಅಧ್ಯಕ್ಷ ಶರಣಬಸಪ್ಪ ಧನ್ನಾ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯರಾದ ಶರಣಗೌಡ ದಳಪತಿ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಶೆಡ್ ನಿರ್ಮಾಣ ಮಾಡುವುದು ಬಹು ದಿನಗಳ ಬೇಡಿಕೆಯಾಗಿತ್ತು.

Contact Your\'s Advertisement; 9902492681

ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರಲಾಯಿತು. ಅಲ್ಲದೇ ಮಂದಿರದ ಆವರಣದಲ್ಲಿ ಶೇಡ್ ನಿರ್ಮಾಣ ಮಾಡಿಕೊಡಲು ಮನವಿ ಮಾಡಿದಾಗ ತಕ್ಷಣವೇ ಗ್ರಾಮದ ರಾಮಲಿಂಗೇಶ್ವರ ಮಂದಿರದ ಆವರಣದ ಟಿನ್ ಶೆಡ್ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 3 ಲಕ್ಷ ರೂ. ಅನುದಾನ ಒದಗಿಸಿದ್ದಾರೆ.ಇದರಿಂದ ಇಲ್ಲಿನ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಲಿದೆ.ಅಲ್ಲದೇ ಬೇಸಿಗೆಯಲ್ಲಿ ಭಕ್ತಾಧಿಗಳು ಬಂದರೆ ಕಾಲು ಸುಡುವುದರಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದರು.ಆದರೆ ಕೆಲವೇ ದಿನಗಳಲ್ಲಿ ಶೆಡ್ ನಿರ್ಮಾಣವಾಗಿ, ಹಿಂದಿನ ಸಮಸ್ಯೆಗಳು ದೂರವಾಗಲಿವೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ರಮೇಶ್ ಕಾಳನೂರ್, ಮಲ್ಲಿಕಾರ್ಜುನ ಧರಿ, ಅರ್ಚಕರಾದ ಹಣಮಂತರಾಯ ಹೂಗಾರ್, ನಾನಾ ಸಾಹೇಬ ಮಾನಕಾರ, ಸಂಗಣ್ಣ ಅರಣಕಲ್, ಲಕ್ಷ್ಮಿಕಾಂತ್ ಹೂಗಾರ, ಚಂದ್ರಕಾಂತ್ ಪಾಟೀಲ್ ಇನ್ನಿತರ ಗ್ರಾಮದ ಸದಸ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here