ಕಲಬುರಗಿಯಿಂದ ಆರ್.ಡಿ ಪಾಟೀಲ್ ಮತ್ತೆ ಪರಾರಿ: ಪೊಲೀಸರು ಬಂಧಿಸುವಲಿ ವಿಫಲ

0
67

ಕಲಬುರಗಿ: ಪಿಎಸ್‌ಐ ಮತ್ತು ಕೆಇಎ ಪರೀಕ್ಷೆಗಳಲ್ಲಿ ಆಕ್ರಮ ನಡೆಸಿದ ಪ್ರಕರಣದ ಪ್ರಮುಖ ಆರೋಪಿ ಆರ್‌.ಡಿ ಪಾಟೀಲ್‌ ಇಲ್ಲಿನ ಜೇವರ್ಗಿ ರಸ್ತೆಯ ವರ್ಧಾ ನಗರದ ಪ್ಲಾಟ್‌ ಒಂದರಲ್ಲಿ ಪೊಲೀಸರು ಬಂಧಿಸಲು ಬಂದಿರುವ ವೇಳೆ ತಪ್ಪಿಸಿಕೊಂಡು ಪರಾರಿಯಾಗಿರುವುದು ವರದಿಯಾಗಿದೆ. ಆತ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೇರಿಯಾಗಿದೆ.

ಆರೋಪಿ ಆರ್‌.ಡಿ ಪಾಟೀಲ್‌ ಸೋಮವಾರ ಇಲ್ಲಿನ ವರ್ಧಾ ನಗರದಲ್ಲಿರುವ ಫ್ಲಾಟ್‌ ಒಂದರಲ್ಲಿ ಅಡಗಿಕೊಂಡಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಆತ ಫ್ಲಾಟ್‌ ನ ಕಾಂಪೌಂಡ್‌ ಮೇಲಿಂದ ಹಾರಿ ತಪ್ಪಿಸಿಕೊಂಡು ಹೋಗಿದ್ದಾನೆನ್ನಲಾಗಿದೆ.

Contact Your\'s Advertisement; 9902492681

ಇತ್ತೀಚೆಗೆ ನಡೆದಂತಹ ರಾಜ್ಯದ ನಿಗಮ, ಮಂಡಳಿಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದಂತಹ ಲಿಖಿತ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ನಡೆದ ಪರೀಕ್ಷಾ ಅಕ್ರಮದಲ್ಲಿ ತನ್ನ ಹೆಸರು ಪ್ರಸ್ತಾಪವಾಗಿದ್ದಲ್ಲದೆ, ಪೊಲೀಸ್‌ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರ್‌.ಡಿ. ಪಾಟೀಲ ತಲೆ ಮರೆಸಿಕೊಂಡಿದ್ದ.

ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಬ್ಲೂಟೂತ್‌ ವ್ಯವಸ್ಥೆ ಮಾಡಿಕೊಡಲು ಕಲಬುರಗಿ ನಗರಕ್ಕೆ ಬಂದು ವಸತಿ ಸಮುಚ್ಛಯ ಒಂದರಲ್ಲಿತಂಗಿದ್ದ ಎಂದು ಹೇಳಲಾಗಿತ್ತಿದೆ. ಈ ಹಿಂದೆ ಮನೆಯ ಹಿಂಬಾಗಿಲಿಸಿಂದ ಪರಾರಿಯಾಗಿದ್ದ ಆರ್‌.ಡಿ ಪಾಟೀಲ್‌; ಈ ಹಿಂದೆ (2023ರ ಜನವರಿ 20) ಪಿಎಸ್‌ಐ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ವಾರೆಂಟ್‌ ನೀಡಲು ಸಿಐಡಿ ಅಧಿಕಾರಿಗಳು ಆರ್‌.ಡಿ. ಪಾಟೀಲ್‌ ಮನೆಗೆ ತೆರಳಿದ್ದ ವೇಳೆ ಆತ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದ ಘಟನೆ ವರದಿಯಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here