ಸಂಸದ ಡಾ. ಉಮೇಶ್ ಜಾಧವ್ ಅವರಿಂದ ಬಿಜೆಪಿ ಹಿರಿಯ ಮುಖಂಡ ಸೇಡಂ, ಧಾರವಾಡ ಕರ್ ಭೇಟಿ

0
13

ಕಲಬುರಗಿ: ಲೋಕಸಭಾ ಅಭ್ಯರ್ಥಿ ಸಂಸದ ಡಾ. ಉಮೇಶ್ ಜಾಧವ್ ಅವರು ಇಂದು ಬಿಜೆಪಿಯ ಹಿರಿಯ ನಾಯಕ ಮತ್ತು ಬಿಜೆಪಿ ಮುಖಂಡರರಾದ ಮಾಜಿ ಲೋಕಸಭಾ ಸದಸ್ಯ ಬಸವರಾಜ್ ಪಾಟೀಲ್ ಸೇಡಂ ಅವರನ್ನು ಭೇಟಿ ಮಾಡಿ ಚರ್ಚಿಸಿ ಮಾರ್ಗದರ್ಶನ ಪಡೆದರು.

ಪ್ರಸಕ್ತ ಚುನಾವಣೆಯಲ್ಲಿನ ಕಾರ್ಯ ಚಟುವಟಿಕೆಗಳ ಬಗ್ಗೆ ಉತ್ತಮವಾಗಿ ಕೆಲಸ ಮಾಡಿ ಭವಿಷ್ಯದ ದೊಡ್ಡ ಕನಸು ಇಟ್ಟುಕೊಂಡು ಜನಪ್ರೀತಿಗೆ ಪಾತ್ರರಾಗಿ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ಸರ್ವ ಜನರ ಮನಸ್ಸು ಗೆಲ್ಲುವ ರೀತಿಯಲ್ಲಿ ಕೆಲಸ ಮಾಡಿ ಎಂದು ಸೇಡಂ ಶುಭ ಹಾರೈಸಿದರು.

Contact Your\'s Advertisement; 9902492681

ತಮ್ಮಂತಹ ಹಿರಿಯರ ಆಶೀರ್ವಾದ ಮತ್ತು ಮಾರ್ಗದರ್ಶನವೇ ನನಗೆ ಶ್ರೀರಕ್ಷೆ ಸದಾಕಾಲ ಮಾರ್ಗದರ್ಶನ ಇರಲಿ ಎಂದು ಜಾಧವ್ ಈ ಸಂದರ್ಭದಲ್ಲಿ ಹೇಳಿದರು.

ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ಮುಖಂಡರಾದ ದಯಾಘನ ಧಾರವಾಡಕರ್ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದರು.

ತಮ್ಮ ಅವಧಿಯ ಉತ್ತಮ ಕೆಲಸಗಳು ಜನತೆಗೆ ಈಗ ಮನವರಿಕೆ ಆಗಿ ಮೋದಿಯವರ ಅಭಿವೃದ್ಧಿ ಪರ ಆಡಳಿತ,ಶ್ರೀರಾಮ ಮಂದಿರ ನಿರ್ಮಾಣದಂತಹ ಐತಿಹಾಸಿಕ ಕಾರ್ಯ ಜನಮನದಲ್ಲಿ ಉಳಿದುಕೊಂಡಿದೆ.ಅದು ಬೆಂಬಲವಾಗಿ ಕೆಲಸ ಮಾಡಲಿದೆ.ತಮಗೆ ಶುಭವಾಗಲಿ ಎಂದು ದಯಾಘನ ಧಾರವಾಡಕರ್ ಶುಭ ಹಾರೈಸಿ ಬೀಳ್ಕೊಟ್ಟರು.

ತಮ್ಮಂತಹ ಹಿರಿಯ ಮುಖಂಡರ ಮಾರ್ಗದರ್ಶನದಿಂದ ಉತ್ತಮ ಕೆಲಸಗಳನ್ನು ಮಾಡಲು ಸ್ಪೂರ್ತಿ ಸಿಗುವುದಾಗಿ ಡಾ. ಉಮೇಶ್ ಜಾಧವ್ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here