ಆಳಂದ: 1990ರ ಆಯೋಧ್ಯೆಯ ಹೋರಾಟದ ಸಮಯದಲ್ಲಿ ಕರಸೇವಕರಾಗಿ ತೆರಳಿದ್ದ ಆಳಂದ ಪಟ್ಟಣದ ಹಿರಿಯ ಬಿಜೆಪಿ ಮುಖಂಡರಾದ ತಾನಾಜಿ ಸೂರ್ಯವಂಶಿ ಮತ್ತು ಮಹೇಶ ಸೂರೆ ಅವರನ್ನು ಆಳಂದ ಮಂಡಲ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.
ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ಪ್ರ. ಕಾರ್ಯದರ್ಶಿಗಳಾದ ಪ್ರಕಾಶ ಮಾನೆ, ಶರಣು ಕುಮಸಿ, ಮುಖಂಡರಾದ ಸಂಜಯ ಮಿಸ್ಕಿನ್, ಮಲ್ಲಿಕಾರ್ಜುನ ಕಂದಗೂಳೆ, ಮಹೇಶ ಗೌಳಿ ಸೇರಿದಂತೆ ಅಪಾರ ರಾಮ ಭಕ್ತರು ಭಾಗವಹಿಸಿದ್ದರು.