ವೀರಶೈವ ಲಿಂಗಾಯತ ಅಭಿವೃಧ್ಧಿ ನಿಗಮಕ್ಕೆ ಸಂತಸ:ಸುರಪುರದಲ್ಲಿ ಹರ್ಷಾಚರಣೆ

0
40

ಸುರಪುರ: ಮುಖ್ಯಂಮತ್ರಿ ಬಿ.ಎಸ್.ಯಡಿಯೂರಪ್ಪನವರು ವೀರಶೈವ ಲಿಂಗಾಯತ ಅಭಿವೃಧ್ಧಿ ನಿಗಮವನ್ನು ಘೋಷಣೆ ಮಾಡಿದ್ದಕ್ಕೆ ಸುರಪುರ ತಾಲೂಕಿನ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಗು ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಹರ್ಷಾಚರಣೆ ಆಚರಿಸಲಾಯಿತು.

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪ ಬಳಿಯಲ್ಲಿನ ಬಸವೇಶ್ವರ ವೃತ್ತದಲ್ಲಿ ಸೇರಿದ ಅನೇಕ ಜನ ಮುಖಂಡರು ಹಾಗು ಕಾರ್ಯಕರ್ತರು ಬಸವೇಶ್ವರರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ರಾಜ್ಯದಲ್ಲಿ ಸುಮಾರು ಒಂದು ಕೋಟಿಗು ಅಧಿಕ ಸಂಖ್ಯೆಯ ವೀರಶೈವ ಲಿಂಗಾಯತ ಸಮುದಾಯದ ಜನರಿದ್ದು ಅದರಲ್ಲಿ ತೀರಾ ಹಿಂದುಳಿದಿರುವವರ ಸಂಖ್ಯೆ ಹೆಚ್ಚಿದೆ,ಈ ಎಲ್ಲಾ ಸಮುದಾಯದ ಜನರ ಅಭೀವೃಧ್ಧಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರು ಅಭೀವೃಧ್ಧಿ ನಿಗಮ ಘೋಷಣೆ ಮಾಡಿರುವುದು ಸಂತೋಷದ ಸಂಗತಿಯಾಗಿದೆ.ಈ ಕಾರಣಕ್ಕಾಗಿ ಸರಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂಧನೆ ಸಲ್ಲಿಸುವುದಾಗಿ ತಿಳಿಸಿದರು.

ನಂತರ ಮಹಾತ್ಮ ಗಾಂಧಿ ವೃತ್ತಕ್ಕೆ ತೆರಳಿ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮುಖಂಡರಾದ ಬಸವರಾಜ ಜಮದ್ರಖಾನಿ ಜಿ.ಎಸ್.ಪಾಟೀಲ್,ಹೆಚ್.ಸಿ.ಪಾಟೀಲ್ ಮಲ್ಲಣ್ಣ ಸಾಹು ಶಾಂತರಾಜ ಬಾರಿ ಮಂಜುನಾಥ ಜಾಲಹಳ್ಳಿ ಪ್ರಕಾಶ ಅಂಗಡಿ ಪ್ರದೀಪ ಕದರಾಪುರ ಚಂದ್ರಶೇಖರ ಡೊಣುರ ವಿರೇಶ ಪಂಚಾಂಗಮಠ ಮಹೇಶ ಪಾಟೀಲ್ ಶರಣು ಮುಧೋಳ ಜಗದೀಶ ಪಾಟೀಲ್ ದೇವಿಂದ್ರಪ್ಪಗೌಡ ಮಾಲಗತ್ತಿ,ಮಲ್ಲು ಬಾದ್ಯಾಪುರ ರವಿಕುಮಾರ ಹೆಮನೂರ ಸಿದ್ದನಗೌಡ ಹೆಬ್ಬಾಳ ಮಲ್ಲಿಕಾರ್ಜುನ ರಡ್ಡಿ ಅಮ್ಮಾಪುರ ಬಸ್ಸಯ್ಯಸ್ವಾಮಿ ಬೋನಾಳ ರಾಜು ಗುಡೂರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here