ಸಮಾಜ ಸುಧಾರಿಸಿದ ದಾರ್ಶನಿಕ: ಪೂಜಾರಿ

0
67

ಕಲಬುರಗಿ : ದಾಸ ಸಾಹಿತ್ಯದಲ್ಲಿ ಕನಕದಾಸರದ್ದು ಮಹತ್ವದ ಅಧ್ಯಾಯ. ಅವರು ಅಂದಿನ ಸಮಾಜದಲ್ಲಿಯೇ ಜಾತಿ, ಮತ, ಧರ್ಮಗಳ ಸಂಕೋಲೆಯನ್ನು ಮೀರಿ ಸಮಾಜ ಸುಧಾರಣೆಗೆ ಮುಂದಾಗುತ್ತಾರೆ ಎಂದು ನ್ಯಾಯವಾದಿ ನಾಗೇಂದ್ರಪ್ಪ ಪೂಜಾರಿ ಹೇಳಿದರು.

ನಗರದ ಎಮ್.ಎನ್.ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಾಸ ಸಾಹಿತ್ಯ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತದೆ. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಇಂದಿಗೂ ಪ್ರಸ್ತುತವಾಗಿದ್ದಾರೆ ಎಂದರು.

Contact Your\'s Advertisement; 9902492681

ಹಿಂದುಳಿದ ವರ್ಗದಲ್ಲಿ ಜನಿಸಿದ ಕನಕದಾಸರು ಇಡೀ ಮಾನವ ಕುಲದ ಸುಧಾರಣೆಗೆ ಪ್ರಯತ್ನಿಸಿದ್ದು ನೆನೆದರೆ ರೋಮಾಂಚನವಾಗುತ್ತದೆ. ಕುಲ ಕುಲವೆಂದು ಹೊಡೆದಾಡದಿರಿ ಎಂಬ ಅವರ ಕೀರ್ತನೆ ಇಡೀ ಮಾನವ ಸಮಾಜವನ್ನೇ ತಿದ್ದಿ, ಸರಿಯಾದ ಹಾದಿಯಲ್ಲಿ ಮುನ್ನಡೆಸಲಿದೆ ಎಂದರು.

ಸಂತ ಕವಿ ಕನಕದಾಸರು ಜಾತಿ, ಮತ, ಧರ್ಮಗಳನ್ನು ಮೀರಿ ಬೆಳೆದ ಶ್ರೇಷ್ಠ ಚೇತನ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದರೆ ಉತ್ತಮ ಸಮಾಜ ನಿರ್ಮಿಸಬಹುದು. ಅವರ ಕೀರ್ತನೆಗಳು ಮಾನವ ಜೀವನ ಹೇಗೆ ಸರಿಯಾದ ದಾರಿಯಲ್ಲಿ ನಡೆಯಬೇಕು ಎನ್ನುವುದನ್ನು ತಿಳಿಸುತ್ತವೆ. ಅವರ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಮ್.ಎನ್. ದೇಸಾಯಿ ಕಾಲೇಜಿನ ಕಾರ್ಯದರ್ಶಿಗಳಾದ ಜಗನ್ನಾಥ್ ನಾಗೂರ್ ಮಾತನಾಡಿ, ಕನಕದಾಸರು ತಮ್ಮ ಅನುಭವ, ನೋವು, ದುಃಖ, ಸುಖಗಳನ್ನೇ ಕೀರ್ತನೆಗಳ ಮೂಲಕ ಜನ ಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋದವರು. ಆ ಮೂಲಕ ಸಾಮಾನ್ಯ ಜನರ ಬದುಕನ್ನು ತಿದ್ದಿ, ತೀಡಿ ರೂಪಿಸಿದರು ಎಂದು ತಿಳಿಸಿದರು.

ಮಠ, ಮಾನ್ಯಗಳನ್ನು ಕಟ್ಟದೆ ಜನಸಾಮಾನ್ಯರ ಮಧ್ಯೆಯೇ ಇದ್ದುಕೊಂಡು ತಮ್ಮ ಸಾಹಿತ್ಯದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಮೇಲು, ಕೀಳು, ಉಚ್ಛ, ನೀಚ ಎಂಬ ಭೇದ ಭಾವವನ್ನು ತೊಡೆದು ಹಾಕಲು ಶ್ರಮಿಸಿದ್ದರು. ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ದಾಸರು ರಚಿಸಿದ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ. ಮೂಢನಂಬಿಕೆ, ಅಧಿಕಾರಶಾಹಿಯನ್ನು ಪಕ್ಕಕ್ಕೆ ಸರಿಸಿ ಆ ಜಾಗಕ್ಕೆ ಭಗವಂತನನ್ನು ತಂದು ಕೂರಿಸಿದವರು ಕನಕದಾಸರು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಧರ್ಮರಾಜ್ ಬಿ. ಹೇರೂರು ಅವರು, ಕೀರ್ತನೆಗಳ ಮೂಲಕ ಇಡೀ ಸಮಾಜವನ್ನು ತಿದ್ದಿ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕನಕದಾಸರು ಶ್ರಮಿಸಿದವರು. ಬಲಿಷ್ಠ ಸಮುದಾಯದವರು ಸಣ್ಣ ಸಮುದಾಯದ ಮೇಲೆ ದೌರ್ಜನ್ಯ ಮಾಡುತ್ತಿದ್ದಾಗ ಎಲ್ಲಾ ಸಮುದಾಯದ ವರು ಒಂದೇ ಎನ್ನಲು ಕುಲ ಕುಲವೆಂದು ಏಕೆ ಹೊಡೆದಾಡುತ್ತೀರಿ ಎಂಬ ಕೀರ್ತನೆ ರಚಿಸುವ ಮೂಲಕ ಸಮಾಜವನ್ನು ಒಂದುಗೂಡಿಸಿದರು ಎಂದರು.

ಇದೇ ಸಂದರ್ಭದಲ್ಲಿ ಎಮ್.ಎನ್.ದೇಸಾಯಿ ಕಾಲೇಜಿನ ಅಧ್ಯಕ್ಷರಾದ ಸಂದೀಪ್ ದೇಸಾಯಿ, ಲಕ್ಷ್ಮಣ್ ಜಮಾದಾರ್, ಜೆಸ್ಕಾಂ ಅಧಿಕಾರಿ ರವಿ  ಸಂಗ್ ಶೆಟ್ಟಿ, ಉಪನ್ಯಾಸಕರಾದ ನಾಗರಾಜ್ ಪಟ್ಟಣಕರ್, ಪ್ರಕಾಶ್ ರಾಠೋಡ್, ಮಂಜುನಾಥ್ ಬನ್ನೂರ್, ರಾಧಿಕಾ ಗುತ್ತೇದಾರ್, ಅನ್ನಪೂರ್ಣ ಪಸಾರ, ಸಂತೋಷ್ ಲಸ್ಕರ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here