ಕಲಬುರಗಿ: ಬಸವ ಜಯಂತಿ ಪ್ರಯುಕ್ತ ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ವೈದ್ಯರಾದ ಡಾ.ಎಸ್.ಬಿ.ಕಾಮರೆಡ್ಡಿ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಎಚ್ಕೆಸಿಸಿಐ ಗೌರವ ಕಾರ್ಯದರ್ಶಿ ಶರಣು ಪಪ್ಪಾ, ಶಂಕರಲಿಂಗ ಬೋಲಶೇಟ್ಟಿ, ಈರಣ್ಣ ಬೇಲೂರ, ಪೊಲೀಸ್ ಸಿಬ್ಬಂದಿಗಳಾದ ಮಲ್ಲಣಗೌಡ, ರಾಜಕುಮಾರ ಇದ್ದರು.