ಎಚ್.ಎಸ್.ದೊರೆಸ್ವಾಮಿಯವರ ಶ್ರದ್ಧಾಂಜಲಿ

0
43

ಶಹಾಬಾದ: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ನಿಧನದಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಎಐಡಿವಾಯ್‌ಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಹೆಚ್ ಹೇಳಿದರು.

ಅವರು ಬುಧವಾರ ನಗರದ ಎಐಡಿವಾಯ್‌ಓ ಕಾರ್ಯಾಲಯದಲ್ಲಿ ಆಯೋಜಿಸಲಾದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಎಚ್.ಎಸ್.ದೊರೆಸ್ವಾಮಿಯವರು ಎಲ್ಲಾ ಚುಳುವಳಿಗಳ ನೇತಾರರಿಗೆ ಶಕ್ತಿಯಾಗಿದ್ದರು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ದಿಟ್ಟತನದ ವ್ಯಕ್ತಿಯಾಗಿದ್ದರು. ನ್ಯಾಯಕ್ಕಾಗಿ ಸಾಮಾಜಿಕ ಹಕ್ಕುಗಳಿಗಾಗಿ ಎಂದು ರಾಜಿಯಾಗದೇ ಹೋರಾಟಕ್ಕಿಳಿಯುವ ಮಹಾನ ಚೇತನ ಇಂದು ನಮ್ಮಿಂದ ಕಣ್ಮರೆಯಾಗಿದ್ದು ನುಂಗಲಾರದ ತುತ್ತಾಗಿದೆ.ಅವರ ಆದರ್ಶಗಳು ಇಂದಿನ ಎಲ್ಲಾ ಚುಳುವಳಿಯ ನೇತಾರರಿಗೆ, ಕಾರ್ಯಕರ್ತರಿಗೆ, ರಾಜಕೀಯ ಮುಖಂಡರಿಗೆ ದಾರಿದೀಪವಾಗಬೇಕಿದೆ ಎಂದರು.

Contact Your\'s Advertisement; 9902492681

ಶಿವಕುಮಾರ ಕುಸಾಳೆ ಮಾತನಾಡಿ, ಇಂತಹ ಇಳಿವಯಸ್ಸಿನಲ್ಲಿಯೂ ಕೂಡ ಹೋರಾಟಗಳಲ್ಲಿ ದುಮುಕುತ್ತಿದ್ದರು. ಅವರ ಹೋರಾಟದ ಶಕ್ತಿ ಯುವಕರಿಗೆ ಪ್ರೇರಣೆಯಾಗಿತ್ತು ಎಂದು ಹೇಳಿದರು. ರಾಜೇಂದ್ರ ಅತನೂರ, ನೀಲಕಂಠ.ಎಮ್.ಹುಲಿ, ಗುಂಡಮ್ಮ ಮಡಿವಾಳ, ಮಹಾದೇವಿ ಮಾನೆ,ತುಳಜಾರಾಮ.ಎನ್.ಕೆ, ರಮೇಶ ದೇವರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here