ಚಿಂಚೋಳಿ ಶಾಲೆಗೆ ಶಿಕ್ಷಕರ ನೇಮಿಸದಿದ್ದರೆ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ: ಕ್ರಾಂತಿ

0
18

ಸುರಪುರ: ತಾಲೂಕಿನ ಚಿಂಚೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನೇಮಿಸದಿದ್ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಮಲ್ಲಿಕಾರ್ಜುನ ಕ್ರಾಂತಿ ಎಚ್ಚರಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದಿಂದ ನಗರದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಚಿಂಚೋಳಿ ಶಾಲೆಯಲ್ಲಿ ಎರಡು ನೂರು ಜನ ವಿದ್ಯಾರ್ಥಿಗಳಿದ್ದು ಕೇವಲ ಇಬ್ಬರು ಶಿಕ್ಷಕರಿದ್ದಾರೆ.ಇದರಿಂದ ಮಕ್ಕಳು ಸರಿಯಾದ ವಿದ್ಯೆ ದೊರೆಯದೆ ಶಿಕ್ಷಣದಿಂದ ವಂಚಿತರಾಗಿದ್ದಾರೆ.ಆದ್ದರಿಂದ ಕೂಡಲೇ ಕ್ಷೇತ್ರಶಿಕ್ಷಣಾಧಿಕಾರಿಗಳು ಚಿಂಚೋಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇನ್ನುಳಿದ ಏಳು ಜನ ಶಿಕ್ಷಕರನ್ನು ನೇಮಿಸಬೇಕು,ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮುಳ್ಳು ಬೇಲಿ ಪ್ರತಿಭಟನೆ ನೆಡಯಲಿದೆ ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಬರೆದ ಮನವಿಯ್ನ ದೈಹಿಕ ಶಿಕ್ಷಣಾಧಿಕಾರಿಗಳ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಅಜೀಜ್ ಸಾಬ್ ಐಕೂರ್,ಮಲ್ಲಿಕಾರ್ಜುನ ಕುರಕುಂದಿ,ಡಾ:ಮಲ್ಲಿಕಾರ್ಜುನ ಆಶನಾಳ,ನಿಂಗಪ್ಪ ಕಟಗಿ ಶಹಾಪುರ,ಮಾನಪ್ಪ ಬಿಜಾಸಪುರ,ಮಹಾದೇವಪ್ಪ ಬಿಜಾಸಪುರ,ಬುದ್ಧಿವಂತ ನಾಗರಾಳ,ಚಂದ್ರಶೇಖರ ಹಸನಾಪುರ,ಜಟ್ಟೆಪ್ಪ ನಾಗರಾಳ,ಮಲ್ಲಿಕಾರ್ಜುನ ಶಾಖಾನವರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here