ಕಲಬುರಗಿ: ಡಿಸೇಂಬರ್ 10 ರಂದು ನಡೆಯುವ ಖರ್ಗೆ ಕಲ್ಯಾಣ ಕ್ರಾಂತಿ ಸಮಾವೇಶ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರ್ ಅವರು ನಗರದ ಎನ್ವಿ ಮೈದಾನದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರವೀಣ ಪಾಟೀಲ ಹರವಾಳ, ಡಾ.ಕಿರಣ ದೇಶಮುಖ, ಮಜರ ಆಲಂ ಖಾನ್, ರಾಜಿವ ಜಾನೆ, ಈರಣ ಝಳಕಿ, ಸಚಿನ ಶಿರವಾಳ, ಫಾರುಖ ಮನಿಯಾರ, ಸಿದ್ದಾರ್ಥ ಕೋರವಾರ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.