ಸುರಪುರ: ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‍ನಲ್ಲಿ ಕ್ರಿಸ್ಮಸ್ ಆಚರಣೆ

0
10

ಸುರಪುರ: ನಗರದ ಹಳೆ ಬಸ್ ನಿಲ್ದಾಣ ಬಳಿಯಲ್ಲಿನ ಮೆಥೋಡಿಸ್ಟ್ ಚರ್ಚ್‍ನಲ್ಲಿ ಯೇಸುವಿನ ಜನ್ಮ ದಿನಾಚರಣೆಯ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮ ದಿಂದ ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಈ ಸುನಂದಕುಮಾರ ಕೇಕ್ ಕತ್ತರಿಸಿ ಹಬ್ಬಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುನಂದಕುಮಾರವರು,ಯೇಸು ಕ್ರಿಸ್ತನ ಜನನದ ಸುದ್ದಿಯನ್ನು ದೇವಧೂತರು ತಿಳಿಸಿದರು.ಕುರಿ ಕಾಯುತ್ತಿದ್ದ ಕುರುಬರಿಗೆ ಈ ಸುದ್ದಿ ತಿಳಿಯುತ್ತಿದ್ದಂತೆ ಅವರು ತಮ್ಮ ಕುರಿಗಳನ್ನು ತೆಗೆದುಕೊಂಡು ಬೆತ್ಲೆಹೇಮ್‍ಗೆ ಹೋಗಿ ನಮಸ್ಕರಿಸಿ ತಮ್ಮ ಕುರಿಗಳನ್ನು ಕಾಣಿಕೆಯಾಗಿ ನೀಡಿದರು ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರ,ಜೆಡಿಎಸ್ ಮುಖಂಡ ಉಸ್ತಾದ ವಜಾಹತ್ ಹುಸೇನ್,ಬಿಜೆಪಿ ಮುಖಂಡರಾದ ಶಂಕರ ನಾಯಕ,ರಾಜಾ ಜಯರಾಮ ನಾಯಕ,ಶ್ರೀನಿವಾಸ ನಾಯಕ ದರಬಾರಿ,ಮಲ್ಲು ದಂಡಿನ್,ವಾಲ್ಮೀಕಿ ನಾಯಕ,ರಂಗನಗೌಡ ಪಾಟೀಲ್,ಅಮರೇಶ ನಾಯಕ,ಪ್ರವೀಣಕುಮಾರ ನಾಯಕ,ಬಸ್ಸು ನಾಯಕ,ಸದಸ್ಯರಾದ ಸ್ಯಾಮುವೆಲ್ ಮ್ಯಾಥ್ಯೂ,ಪಾಲ ನಾಯಕ,ವಸಂತ ಕುಮಾರ,ಜಯಪ್ಪ,ದೇವಪುತ್ರ ರಮೇಶ ಪಾಲ ಥಾಮಸ್,ಅನಿಲ ಸುಜಯಕುಮಾರ, ಸಿಮಿಯೋನ್, ಎಚಿನೇಜರ್,ಸುಭಾಸ್,ಆಕಾಶ್,ಬಂಟಿ ನವೀನ,ವಿಶಾಲ,ಎಸ್ ರೇಸುನಂದಕುಮಾರ,ಸುನೀಲಾ ಶಾಂತಕುಮಾರ,ಸುಮತಿ,ಸಜಾತಾ ಪ್ರಕಾಶ,ಸುಜಾತಾ ಜೆ,ಸೋನಾಕುಮಾರಿ,ಲಲಿತಾ,ಅನಿತಾ,ಸಾಗರೀಕಾ,ಚಂದ್ರ ಮ್ಯಾಥ್ಯೂ,ಮೇರಿ ಮಾರ್ಗರೆಟ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here