ಸಚಿವ ಸಂತೋಷ್ ಲಾಡ್ ಹೇಳಿಕೆಗೆ ಡಾ. ಸುಧಾ ಆರ್ ಹಾಲಕಾಯಿ ಖಂಡನೆ

0
29

ಕಲಬುರಗಿ: ಬೆಂಗಳೂರು ರಾಜ್ಯದ ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಅವರು ವೈದ್ಯರನ್ನು ನಿಂದಿಸಿದ್ದನ್ನು ಬಿಜೆಪಿ ವೈದ್ಯಕೀಯ ಪ್ರಕೋಷ್ಠ ತೀವ್ರವಾಗಿ ಖಂಡಿಸಿದೆ.

‘ವೈದ್ಯೋ ನಾರಾಯಣೋ ಹರಿಃ’ ಎಂದು ಗೌರವದಿಂದ ವೈದ್ಯರನ್ನು ಕಾಣುವ ಈ ನಾಡಿನಲ್ಲಿ ಒಬ್ಬ ಸಚಿವರು ಅನಾಗರಿಕ ಭಾಷೆಯನ್ನು ಬಳಸುವ ಮೂಲಕ ಕಾಂಗ್ರೆಸ್ಸಿನ ಸಂಸ್ಕøತಿಯನ್ನು ಬಹಿರಂಗ ಪಡಿಸಿದ್ದಾರೆ. ಅವರು ವೈದ್ಯರನ್ನು ಮೂರ್ಖರೆಂದು ಸಂಬೋಧಿಸಿರುವುದು ಅಕ್ಷಮ್ಯ ಅಪರಾಧ. ಇದನ್ನು ಬಿಜೆಪಿ ಎಂದೂ ಒಪ್ಪುವುದಿಲ್ಲ ಎಂದು ತಿಳಿಸಿದೆ.

Contact Your\'s Advertisement; 9902492681

ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಕೆಲಸ ಮಾಡುವ ವೈದ್ಯ ಸಮುದಾಯವನ್ನು ವಾಚಾಮಗೋಚರವಾಗಿ ನಿಂದಿಸಿರುವುದು ಕಾಂಗ್ರೆಸ್ಸಿನ ಗೂಂಡಾ ಸಂಸ್ಕೃತಿಯ ಪ್ರತೀಕ. ಇದನ್ನು ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಖಂಡಿಸುತ್ತದೆ ಮತ್ತು ಸಚಿವರು ಕ್ಷಮೆ ಕೇಳಬೇಕೆಂದು ಭಾರತೀಯ ಜನತಾ ಪಕ್ಷ ರಾಜ್ಯ ವೈದ್ಯಕೀಯ ಪ್ರಕೋಷ್ಠರಾದ ಡಾ. ಸುಧಾ ಆರ್ ಹಾಲಕಾಯಿ ಅವರು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here