ಕನ್ನಡ ಭೂಮಿ ಜಾಗೃತಿ ಸಮಿತಿಗೆ ನಗರ ಅಧ್ಯಕ್ಷರಾಗಿ ಪರಮೇಶ್ವರ ನೇಮಕ

0
13

ಕಲಬುರಗಿ: ಕನ್ನಡ ಭೂಮಿ ಜಾಗೃತಿ ಸಮಿತಿ ಕಲಬುರಗಿ ನಗರ ಘಟಕದ ಅಧ್ಯಕ್ಷರಾಗಿ ಯುವ ಮುಖಂಡ ಪರಮೇಶ್ವರ ಹಡಪದ ಹಾಗೂ ಕಾರ್ಯದರ್ಶಿಯಾಗಿ ಅಮೀತ ರಾಜಾಪುರ ಅವರನ್ನು ನೇಮಕ ಮಾಡಲಾಗಿದೆ ಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ತಿಳಿಸಿದ್ದಾರೆ.

ಅದರಂತೆ ಯುವ ಮುಖಂಡರಾದ ಶರಣಕುಮಾರ, ನಾಗರಾಜ ನಂದೂರಕರ ಮತ್ತು ಶಶಿಕಾಂತ ಗಾಯಕವಾಡ ಅವರನ್ನು ಸದಸ್ಯರಾಗಿ ನೇಮಕ ಮಾಡಿದ್ದು,ಈ ಗುರುತರವಾದ ಜವಾಬ್ದಾರಿ ವಹಿಸಿಕೊಂಡು ಕನ್ನಡ ನಾಡು, ನುಡಿ, ನೆಲ ಜಲ ಸಂರಕ್ಷಣೆ ಹಾಗೂ ಸಮಿತಿಯ ಸಂಘಟನೆಯಲ್ಲಿ ತೊಡಗುವಂತೆ ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here