ಕಲಬುರಗಿ: ಸಾಲ ಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ

0
39

ಕಲಬುರಗಿ: ಸಾಲ ಬಾಧೆ ತಾಳಲಾರದೆ ರೈತ ಓರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಇಲ್ಲಿನ ಕಾಳಗಿ ತಾಲ್ಲೂಕಿನ ರುಮ್ಮನಗೂಡ್ ಗ್ರಾಮದಲ್ಲಿ ನಡೆದಿದೆ.

ರುಮ್ಮುನಗುಡ ಗ್ರಾಮದ ನಿವಾಸಿ ಹೈದರ್ ಪಟೇಲ್ (65) ಆತ್ಮಹತ್ಯೆಗೆ ಶರಣಾದ ರೈತ. ಚಿಂಚೊಳಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಲ್ಲಿ ಬೆಳೆ ಸಾಲ 85 ಸಾವಿ, ಕೊಡ್ಲಿ ಗ್ರಾಮದ ವಿಎಸ್ಎಸ್ಎನ್ ಬ್ಯಾಂಕ್ ನಲ್ಲಿ 50 ಸಾವಿರ ಹಾಗೂ ಖಾಸಗಿ ಸಾಲ 3,50,000 ಸೇರಿ 4.85 ಸಾವಿರ ಸಾಲ ಮಾಡಿದ್ದು, ತನ್ನ ಕೃಷಿ ಜಮೀನಲ್ಲಿ ತೊಗರಿ ಬೆಳೆದಿದ್ದು,ಇಳುವರಿಗೆ ಬಂರದೇ ಇರುವುದಕ್ಕೆ ಮನನೊಂದು ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

Contact Your\'s Advertisement; 9902492681

ಪತ್ನಿ ಮತ್ತು ಐವರು ಮಕ್ಕಳು ಹೊಂದಿರುವ ಹೈದರ್ ಪಟೇಲ್ ಮನೆಯಲ್ಲಿ ತೊಗರಿ ಬೆಳೆಗೆ ಹೊಡೆಯುವ ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂದ್ದಾರೆ. ಆತ್ಮಹತ್ಯೆಗೆ ಶರಣಾದ ರೈತನ ಕುಟುಂಬಕ್ಕೆ ಸುಕ್ತ ಪರಿಹಾರ ನೀಡಿ ಸಾಲ ಮನ್ನ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೇಟ್ಟಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here