ಕಲಬುರಗಿ: ಗಣರಾಜ್ಯೋತ್ಸವದ ನಿಮಿತ್ತ ಶುಕ್ರವಾರ ನಗರದ ಹಫತ್ ಗುಂಬಜ್ ಹತ್ತಿರದ ಎಸ್.ಡಿಪಿ.ಐ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಙಾ ವಿಧಿ ಸ್ವೀಕರಿಸುವ ಮೂಲಕ 75ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಅಬ್ದುಲ್ ರಹೀಮ್, ಜಿಲ್ಲಾ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್, ಮೊಹಮ್ಮದ್ ಮೊಹಸಿನ್, ಅಲೀಮ್ ಇಲಾಹಿ, ಮಕ್ಬುಲ್ ಅಹ್ಮದ್, ಸಮೀನಾ ಬೇಗಂ ಸೇರಿದಂತೆ ಹಲವರು ಇದ್ದರು.