Tuesday, July 16, 2024
ಮನೆಕೃಷಿಅಫಜಲಪುರ ರೈತ ಆತ್ಮಹತ್ಯೆ: ಪರಿಹಾರ ನೀಡುವಂತೆ ಒತ್ತಾಯ

ಅಫಜಲಪುರ ರೈತ ಆತ್ಮಹತ್ಯೆ: ಪರಿಹಾರ ನೀಡುವಂತೆ ಒತ್ತಾಯ

ಅಫಜಲಪುರ : ತಾಲ್ಲೂಕಿನ ಬಳೂರ್ಗಿ ಗ್ರಾಮದ ರೈತ ಸಿದ್ದಪ್ಪ ತಂದೆ ರೇವಣಸಿದ್ದಪ್ಪ ಪೂಜಾರಿ ಸಾಲಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೂಲಿ ಮಾಡಲು ಕಳೆದ ಐದು ವರ್ಷದಿಂದ ಕೂಲಿ ಮಾಡಲು ಸಿಂದಗಿ ತಾಲೂಕಿನ ದೇವರನಾವದಗಿ ಗ್ರಾಮಕ್ಕೆ ಹೋಗಿದ್ದರು. ಅಲ್ಲಿಯ ಮಾಲೀಕರ ಹೊಲದಲ್ಲಿಯೇ ವಿಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರಿಗೆ ವಿವಿಧ ಬ್ಯಾಂಕ್, ಖಾಸಗಿ, ಕೈ ಸಾಲ ಸೇರಿದಂತೆ ಐದು ಲಕ್ಷ ಸಾಲ ಮಾಡಿಕೊಂಡಿದ್ದರು. ಮೃತ ರೈತನಿಗೆ ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಇವರಿಗೆ ಯಾವುದೇ ಸ್ವಂತ ಮನೆ ಇಲ್ಲ.

ಕೂಡಲೇ ಸರ್ಕಾರ ಪರಿಹಾರ ನೀಡುವಂತೆ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ತಾಲೂಕಾಧ್ಯಕ್ಷ ಯಲ್ಲಾಲಿಂಗ ಪೂಜಾರಿ ಒತ್ತಾಯಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular