ಯಾರದೋ ದುಡ್ಡು ಯಲ್ಲಮ್ಮ ಜಾತ್ರೆ ಅಂದಂಗಾತ್ರಿ

0
112

ಕಲಬುರಗಿ: ರವಿಶಂಕರ ಗುರೂಜೀ ಜ್ಞಾನ ಕ್ಷೇತ್ರದಲ್ಲಿ ರವಿಶಂಕರ ಗುರೂಜಿ ಅವರ ಭಕ್ತರು ನೀಡಿದಂತಹ ಧವಸ ಧಾನ್ಯಗಳ ಆಹಾರದ ಕೀಟ್‍ಗಳನ್ನು ಜ್ಞಾನ ಕ್ಷೇತ್ರದವರು ಜಿಲ್ಲಾಡಳಿತಕ್ಕೆ ಒಪ್ಪಿಸಲಾದ ಆಹಾರದ ಕಿಟ್‍ಗಳನ್ನು ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಹಂಚಿರುವುದಕ್ಕೆ ಖಂಡಿಸುತ್ತೇವೆ , ಕೋವಿಡ್-19ರ ಆಹಾರ ಕೀಟ್‍ಗಳನ್ನು ಸಂತ್ರಸ್ಥರಿ ಹಂಚುವುದರಲ್ಲಿಯೂ ಯಾರದೋ ದುಡ್ಡು ಯಲ್ಲಮ್ಮ ಜಾತ್ರೆ ಅಂದಂಗಾತ್ರಿ ಎಂದು ನಗೆ ಚಟಾಕಿ ಹಾರಿಸುತ್ತ ಕಲಬುರಗಿ ಮಹಾನಗರ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸೂರಜ್‍ಪ್ರಸಾದ್ ತಿವಾರಿ, ಮಹಾದೇವ ಬೆಳಮಗಿ ಇವರು ಜಂಟಿಯಾಗಿ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಶ್ರಮದ ವತಿಯಿಂದ ಜಿಲ್ಲಾಡಳಿತಕ್ಕೆ ನೀಡಲಾದ ಆಹಾರದ ಕೀಟ್‍ಗಳನ್ನು ಅಲ್ಲಮಪ್ರಭು ಪಾಟೀಲ್ ಅವರ ಕೈಗೆ ಹೇಗೆ ಹೇರಿತು ಎಂಬುವುದಕ್ಕೆ ತನಿಖೆ ಆಗಬೇಕು. ಮತ್ತು ‘ನಮ್ಮ ಕಲಬುರರ್ಗಿ’ ವ್ಯಾಟ್ಸ್‍ಪ್ ಗ್ರೂಪ್‍ನಲ್ಲಿ ಆಹಾರ ಕೀಟ್‍ಗಳನ್ನು ವಿತರಿಸುವ ಚಿತ್ರದ ಕೆಳಗೆ, ಬಡವರ ಬಂಧು ಅಲ್ಲಂಪ್ರಭು ಪಾಟೀಲ್ ಅವರ ವೈಯಕ್ತಿವಾಗಿ ಕೀಟ್‍ಗಳನ್ನು ಹಂಚುತ್ತಿದ್ದಾರೆ ಎಂದು ಹೇಳಿಕೊಂಡಿವುದನ್ನು ನಾವುಗಳು ಖಂಡಿಸುತ್ತೇವೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here