ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾಯಿತಿ ನೀಡಿ: ಸಿದ್ದಣ್ಣಗೌಡ

0
24

ಅಫಜಲಪುರ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರಕಾರದ ೨ಎ ಮೀಸಲಾತಿ ಹಾಗೂ ಲಿಂಗಾಯತ ಬಡ ಸಮಾಜದವರಿಗೆ ಕೇಂದ್ರದ ಓ.ಬಿ.ಸಿ. ಮೀಸಲಾತಿಗಾಗಿ ಸರಕಾಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಅಫಜಲಪುರ ತಾಲೂಕಾ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ಯುವ ಘಟಕದ ವತಿಯಿಂದ ತಹಸೀಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿಪತ್ರ ಸಲ್ಲಸಿದರು.

ಮನವಿ ಪತ್ರ ನೀಡಿ ಮಾತನಾಡಿದ ತಾಲೂಕಾ ಪಂಚಮಸಾಲಿ ಯುವ ಘಟಕ ಅಧ್ಯಕ್ಷರಾದ ಸಿದ್ದಣ್ಣಗೌಡ ಮಾಲಿಪಾಟೀಲ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಕೃಷಿಯನ್ನು ಕುಲಕಸಬುನ್ನಾಗಿಸಿಕೊಂಡು ಹಾಗೂ ಕೃಷಿ ಕೂಲಿಕಾರರಾಗಿರುವ ಪಂಚಮಸಾಲಿ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಹಾಗೂ ಔದೋಗಿಕವಾಗಿ, ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ತಿಳಿಸಿದ ಅವರು ೨೬ ವರ್ಷಗಳಿಂದಲೂ ಸರಕಾರಕ್ಕೆ ಮನವಿ ಮಾಡುತ್ತ ಬಂದಿದ್ದರು ಸಹ ಯಾವುದೇ ಯಾವುದೇ ಸರಕಾರಗಳು ಸ್ಪಂದಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ ಅವರು ಆದಷ್ಟು ಬೇಗ ಈ ಹಿಂದುಳಿದ ಸಮುದಾಯಕ್ಕೆ ೨ ಎ ಮೀಸಲಾತಿ ನೀಡಿ ನ್ಯಾಯ ನೀಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.

Contact Your\'s Advertisement; 9902492681

ಕಾಮಗಾರಿ ಮಾಡದೇ ಹಣ ದುರ್ಬಳಕೆ ಆರೋಪ: ಕ್ರಮಕ್ಕೆ ಒತ್ತಾಯಿಸಿ ಸರದಿ ಉಪವಾಸ ಸತ್ಯಾಗ್ರಹ

ಈ ಸಂದರ್ಭದಲ್ಲಿ ತಾಲೂಕಾ ಲಿಂಗಾಯತ ಪಂಚಮಸಾಲಿ ಸಮಾಜ ಅಧ್ಯಕ್ಷರಾದ ಚಂದು ದೇಸಾಯಿ, ಮುಖಂಡರಾದ ಮಲ್ಲು ಸೋಲಾಪುರ, ಕಾಂತು ಮ್ಯಾಳೇಶಿ, ಬಸವರಾಜಗೌಡ ಪಾಟೀಲ, ನಾಗರಾಜ ಬುಜರಿ, ಸುರೇಶ ಮಳ್ಳಿ, ಬಸವರಾಜ, ಸಿದ್ದರಾಮ ಕಲಕೇರಿ, ರೇವಣಸಿದ್ದ ಮಲ್ಲಬಾದ, ಮಹಾಂತೇಶ, ಗುರುಪಾದಗೌಡ, ಯಶ್ವರಾಯ ಅಳ್ಳಗಿ, ಶಿವರಾಯ ರಟಕಲ್, ಭೀಮರಾವ, ಸಿದ್ದಪ್ಪ ರಾಂಪೂರೆ, ಬಾಬುಗೌಡ ಪಾಟೀಲ, ದಾದಗೌಡ ಜವಳಿ, ಸುರೇಶ ಮಾಲಿ ಪಾಟೀಲ, ಶಿವಾನಂದಗೌಡ, ಸಂತೋಷ ಮಾಲೀಪಾಟೀಲ, ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here