ಮಹಿಳೆಯರ ಸಾಧನೆ ಮೆಚ್ಚುವಂತದ್ದು:ಗಂಗಮ್ಮ ಮಣ್ಣೂರ

0
21

ಶಹಾಪುರ : ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಎಲ್ಲ ಅಡೆತಡೆಗಳನ್ನು ಮೀರಿ ಕಲೆ,ಸಾಹಿತ್ಯ,ಸಂಗೀತ,ಸಂಸ್ಕೃತಿ,ರಾಜಕೀಯ,ವಿಜ್ಞಾನ,ತಂತ್ರಜ್ಞಾನ,ಆರ್ಥಿಕ,ಸಾಮಾಜಿಕ,ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆಯನ್ನು ಮಾಡಿ ಮೆರೆದಿದ್ದಾರೆ ಅವರೆಲ್ಲರ ಆದರ್ಶ ತತ್ವಗಳು ನಮಗೆ ಸ್ಫೂರ್ತಿಯಾಗಿವೆ ಎಂದು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಶ್ರೀಮತಿ ಗಂಗಮ್ಮ ಮಣ್ಣೂರ ಹೇಳುದರು.

ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ ಸವಿತಾ ಸಮಾಜ ಕಲ್ಯಾಣ ಮಂಟಪದಲ್ಲಿ ಭಾರತೀಯ ಮಹಿಳಾ ಮೋರ್ಚಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಶಹಾಪೂರ ಮಂಡಲ ಬಿಜೆಪಿ ಅಧ್ಯಕ್ಷ ರಾಜುಗೌಡ ಉಕ್ಕಿನಾಳ ಮಾತನಾಡಿ ಪ್ರತಿಯೊಬ್ಬ ಮಹಿಳೆಯರಿಗೆ ಗೌರವ ಕೊಡುವ ಅತ್ಯವಶ್ಯಕವಾಗಿದೆ,ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಮಾರಂಭದ ವೇದಿಕೆ ಮೇಲೆ ಮುಖಂಡರಾದ ಯಲ್ಲಯ್ಯ ನಾಯಕ,ವನದುರ್ಗ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚನ್ನಮ್ಮ ಜೇರಬಂಡಿ,ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುರೇಖಾ,ಪ್ರಧಾನ ಕಾರ್ಯದರ್ಶಿ ಸಂಗೀತಾ ಹೂಗಾರ,ಮಲ್ಲಿಕಾರ್ಜುನ ಹಿರೇಮಠ,ನಿರ್ಮಲ,ಮೀನಾಕ್ಷಿ,ಭಾಗ್ಯಶ್ರೀ ಕರಣಿಗಿ ತಿಪ್ಪಣ್ಣ ಬಾವಿ,ರಾಘವೇಂದ್ರ ಹಡಪದ್, ವಿಮಲಾಕ್ಷಿ,ಮಾದೇವಪ್ಪ ಅವಂಟಿ,ಸಂಗಣ್ಣ ಬಡಗ ಮಲ್ಲಿಕಾರ್ಜುನ್ ದೋತ್ರೆ,ಹಾಗೂ ಇತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬಸವಲಿಂಗಮ್ಮ ಹಾಗೂ ಯಮುನಮ್ಮ ಕೆಂಬಾವಿ ಅವರನ್ನು ಸನ್ಮಾನಿಸಿ ಸತ್ಕರಿಸಲಾಯಿತು ಜೊತೆಗೆ ಆರೋಗ್ಯ ತಪಾಸಣೆ ಕೂಡ ಹಮ್ಮಿಕೊಳ್ಳಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here