ಜನಸೇವೆಯೇ ಜನಾರ್ದನ ಸೇವೆ ಎಂದು ಭಾವಿಸಿದ ವ್ಯಕ್ತಿ ರಾಠೋಡ:ಕಂಬಳೇಶ್ವರ ಶ್ರೀಗಳು

0
154

ಚಿತ್ತಾಪುರ: ಜನ ಸಾಮಾನ್ಯರ ಕಷ್ಟಕ್ಕೆ ತಕ್ಷಣ ಧಾವಿಸಿ,ಜನಸೇವೆಯೇ ಜನಾರ್ಧನ ಸೇವೆ ಎಂದು ಸೇವೆ ಮಾಡುತ್ತಿರುವ ಯುವ ನಾಯಕ ಅಶ್ವಥ ರಾಠೋಡ ಎಂದು ಕಂಬಳೇಶ್ವರ ಮಠದ ಪೀಠಾಧಿಪತಿ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ದೇವಾಲಯದ ಆವರಣದಲ್ಲಿ ಕಲಬುರ್ಗಿ ಜಿಲ್ಲಾ ಘೋರ ಸೇನಾ ಉಪಾಧ್ಯಕ್ಷ, ಬಿಜೆಪಿ ಯುವ ಮುಖಂಡ ಅಶ್ವಥ ರಾಠೋಡ ಅವರ 30ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀಗಳು ಜನಸಾಮಾನ್ಯರು ಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿ ನೋಡಿ ತಮ್ಮ ಕೈಲಾದ ಸಹಾಯ ಮಾಡುತ್ತಾರೆ,ಸೇವಾ ಮನೋಭಾವ ಹೊಂದಿದ್ದಾರೆ.ಎಲ್ಲಾ ವರ್ಗದ ಜನರೊಂದಿಗೆ ಆರೋಗ್ಯಕರ ಸಂಬಂದ ಹೊಂದಿದ್ದಾರೆ.ಒಳ್ಳೆಯ ಸಂಸ್ಕಾರ ಹೊಂದಿದ್ದ ಇಂತಹ ಯುವಕರು ದೇಶದ ಭವಿಷ್ಯದ ನಿರ್ಮಾಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಆಶೀರ್ವಚನ ನೀಡಿದರು.

Contact Your\'s Advertisement; 9902492681

ಪುರಸಭೆ ಸದಸ್ಯ ಶ್ಯಾಮ ಮೇಧಾ ಮಾತನಾಡಿ ರಾಷ್ಟ್ರದ ಬಗ್ಗೆ ಅತ್ಯಂತ ಗೌರವ ಪ್ರೀತಿ ಹೊದಿಂದ ವ್ಯಕ್ತಿ.ಇಂತಹ ಯುವಕರು ಈ ನಾಡಿಗೆ ಬೇಕು ಇವರಲ್ಲಿರುವ ಸೇವಾ ಮನೋಭಾವ ಯುವಕರಿಗೆ ಸ್ಫೂರ್ತಿ ನೀಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯ ಅರವಿಂದ ಚೌಹಾಣ್,ಪುರಸಭೆ ನಾಮ ನಿರ್ದೇಶನ ಸದಸ್ಯರಾದ ಮನೋಜಕುಮಾರ ರಾಠೋಡ, ಶಶಿ ಭಂಡಾರಿ,ಪ್ರಮುಖರಾದ ಮಂಜುನಾಥ ಶಾಸ್ತ್ರೀ,ಶ್ರೀಕಾಂತ ಸುಲೇಗಾಂವ,ಚಂದ್ರು ಭಜಂತ್ರಿ,ರಾಜು ರಾಠೋಡ, ಕರಿಬಸವಯ್ಯ ಶಾಸ್ತ್ರೀ, ಆಕಾಶ, ರವಿ, ಆನಂದ, ಪ್ರೇಮ್, ಖ್ಯಾದಿಗಪ್ಪ, ನಾಗರಾಜ,ಅಜಯ ಬಿದ್ರಿ, ಮಲ್ಲು ಮುಗಳನಾಗಾಂವ,ಕಾಶಿ ಸಂಗಾವಿ,ಮಣಿಕಂಠ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here