ಜೇವರ್ಗಿ: ದೆಹಲಿಯ ನಿರ್ಭಯ ಕೊಲೆ ಮಾದರಿಯಲ್ಲಿಯೇ ಅತ್ಯಂತ ಕ್ರೂರವಾಗಿ ಮ್ಯಾಜಿಸ್ಟ್ರೇಟ್ ಜೊತೆ ಕೆಲಸ ಮಾಡುತ್ತಿದ್ದ 21 ವರ್ಷ ವಯಸ್ಸಿನ ಸಿವಿಲ್ ಮಹಿಳಾ ಅಧಿಕಾರಿಯನ್ನು ಅತ್ಯಾಚಾರ ಮಾಡಿ ಕೊಲೆ ನಡೆದಿರುವುದು ಅಮಾನವೀಯ ,ಹಾಗೂ ಇಂತಹ ಕೃತ್ಯದ ಆರೋಪಿಗಳನ್ನು ಬಂಧಿಸಿ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಟಿಪ್ಪು ಸುಲ್ತಾನ್ ಮೈನಾರಿಟಿ ವೆಲ್ಫರೆ ಅಸೋಶಿಯೇಶನ್ ತಾಲೂಕ ಅಧ್ಯಕ್ಷರಾದ ಮೋಹಿನುದ್ದಿನ್ ಇನಮ್ದಾರ್ ಆಗ್ರಹಿಸಿದ್ದಾರೆ.
ಇಂತಹ ಘೋರ ಅಪರಾಧಗಳು ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಮೇಲಿಂದ ಮೇಲೆ ನಡೆಯುತ್ತಿದ್ದರೂ ಸಹ ಸರ್ಕಾರ ತಲೆಕೆಡಿಸಿಕೊಂಡಿಲ್ಲ.
ಈ ಕುರಿತಂತೆ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿರುವ ಸರಕಾರವು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಪ್ರಕರಣವನ್ನು ಬೇಧಿಸಲು ವಿಶೇಷ ತನಿಖಾ ತಂಡವನ್ನು ರಚಿಸಿ ಕೊಲೆಯ ಹಿಂದಿನ ರಹಸ್ಯವನ್ನು ಕಂಡು ಹಿಡಿಯಬೇಕೆಂದು ಜೇವರ್ಗಿ ತಾಲೂಕಿನ ಟಿಪ್ಪುಸುಲ್ತಾನ್ ಮೈನಾರಿಟಿ ಅಸೋಸಿಯೇಷನ್ ಆಗ್ರಹಿಸಿದೆ.
ಈ ಕುರಿತಂತೆ ಜೇವರ್ಗಿ ತಸಿಲ್ದಾ ರ ಮೂಲಕ ಮನವಿ ಪತ್ರವನ್ನು ರಾಜ್ಯಪಾಲರು ಕರ್ನಾಟಕ ಸರ್ಕಾರ ಇವರಿಗೆಸಲ್ಲಿಸಿದ್ದಾರೆ.