ಡಿ.30 ರಂದು ಸಾಹಸ ಸಿಂಹ ಪ್ರಶಸ್ತಿ ಪ್ರದಾನ

0
10

ಕಲಬುರಗಿ: ಕನ್ನಡ ಚಲನ ಚಿತ್ರದ ಮೇರು ನಟ ವಿಷ್ಣುವರ್ಧನ್ ಪುಣ್ಯ ಸ್ಮರಣೆ ಅಂಗವಾಗಿ ಸಂಗೀತ ತರಂಗಿಣಿ ಸಾಂಸ್ಕøತಿಕ ಹಾಗು ಸಾಮಾಜಿಕ ಸೇವಾ ಸಂಘ ಡಿಸೆಂಬರ್ 30 ರಂದು ಗಾನ ನಮನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇದೇ ವೇಳೆ ಪತ್ರಕರ್ತ ಗೋಪಾಲ ಕುಲಕರ್ಣಿ ಸೇರಿದಂತೆ ವಿವಿಧ ಕ್ಷೇತ್ರದ 6 ಮಹನೀಯರಿಗೆ ಸಾಹಸಸಿಂಹ ಪ್ರಶಸ್ತಿ ನೀಡಿ ಗೌರವಿಸಲಿದೆ. ನಗರದ ಕನ್ನಡ ಭವನದಲ್ಲಿರುವ ಸುವರ್ಣ ಭವನದಲ್ಲಿ 30 ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

Contact Your\'s Advertisement; 9902492681

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಭವಾನಿ ಸಿಂಗ್ ಠಾಕೂರ್ ವಹಿಸಲಿದ್ದಾರೆ..ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮುಲಗೆ ಹಾಗು ಕಸಾಪ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ ಆಗಮಿಸಲಿದ್ದಾರೆ. ಇನ್ನು ಅತಿಥಿಗಳಾಗಿ ಪತ್ರಕರ್ತ ಗೋಪಾಲ ಕುಲಕರ್ಣಿ ಎಸ್ ಜಿವಿಕೆ ಸಂಘದ ಗೌರವಾಧ್ಯಜ್ಞ ಎಂಜಿ ಘನಾತೆ ಮತ್ತು ಸಂಗೀತ ತರಂಗಿಣಿ ಸಂಘದ ಅಧ್ಯಕ್ಷೆ ಚಂದನಾ ಜವಳಗಿ ಉಪಸ್ತಿತರಿರಲಿದ್ದಾರೆ.

ಡಾ.ಸಂತೋಷ ಮಂಗಶೆಟ್ಟಿ ಖ್ಯಾತ ನರರೋಗ ತಜ್ಞರು, ಹಣಮಂತ ಕಟ್ಟಿ ಸಹಾಯಕ ಆರಕ್ಷಕ ನಿರೀಕ್ಷಕರು, ಸುನೀಲ್ ಕುಮಾರ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಶರಣಪ್ಪ ಬಿರಾದಾರ್ ಮಾಜಿ ಸೈನಿಕರು, ತಿಪ್ಪಯ್ಯ ಆಲಮೇಲಕರ್ ನ್ಯಾಯವಾದಿಗಳು, ಗೋಪಾಲ ಕುಲಕರ್ಣಿ ಪತ್ರಕರ್ತರು-ಗಾಯಕರು ಇವರನ್ನು ಸಾಹಸಸಿಂಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here