ಅಕ್ರಮ ಕಟ್ಟಡಕ್ಕೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ

0
16

ಸುರಪುರ: ನಗರದ ರಂಗಂಪೇಟೆಯ ವಾರ್ಡ್ ಸಂಖ್ಯೆ 21ರ ಖುರೇಶಿ ಮೊಹಲ್ಲಾದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಕ್ರಮ ಪರವಾನಿಗೆ ನೀಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟಗಾರ ಯಲ್ಲಪ್ಪ ಚಿನ್ನಾಕಾರ ಮಾತನಾಡಿ,ಖುರೇಶಿ ಮೊಹಲ್ಲಾದಲ್ಲಿನ ಆಸ್ತಿ ನಂಬರ್ 1-164/37 ಮತ್ತು ಇತರೆ ಆಸ್ತಿ ನಂಬರಿಗೆ ಸಂಭಂದಿಸಿದಂತೆ ಆಕ್ಷೇಪಣೆ ಇದೆ,ಇದಕ್ಕಾಗಿ ತಕರಾರು ಅರ್ಜಿಯನ್ನು ನೀಡಲಾಗಿದೆ.ಆದರೆ ಅರ್ಜಿ ಇತ್ಯರ್ಥವಾಗುವ ಮುನ್ನವೇ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿರುವ ಇಲ್ಲಿಯ ನಗರಸಭೆಯ ಕಿರಿಯ ಅಭಿಯಂತರ ಮತ್ತು ಕಿರಿಯ ನೈರ್ಮಲ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ಧರಣಿ ಸ್ಥಳಕ್ಕೆ ನಗರಸಭೆ ಪೌರಾಯುಕ್ತರು ಆಗಮಿಸಿ ಮನವಿಯನ್ನು ಆಲಿಸಿ ನಂತರ ನಿಮ್ಮ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ನಂತರ ಕ್ರಮ ಕೈಗೊಳ್ಳುವ ಕುರಿತು ಹಿಂಬರ ನೀಡಿದ ನಂತರ ಧರಣಿ ನಿಲ್ಲಿಸಲಾಯಿತು.

ಧರಣಿಗೆ ಅಖಿಲ ಕರ್ನಾಟಕ ಸವಿತಾ ಸಂಘ,ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಭಾಗವಹಿಸಿದ್ದರು.ಧರಣಿಯಲ್ಲಿ ಮಾಳಪ್ಪ ಕಿರದಳ್ಳಿ,ಸುರೇಶ ಚಿನ್ನಾಕಾರ, ಚಂದ್ರಶೇಖರ, ಅಶೋಕ, ಬಸವರಾಜ,ನರಸಪ್ಪ,ವಿಠ್ಠಲ್,ಮುದಕಪ್ಪ,ಮಹೇಶ,ವಿಶ್ವನಾಥ,ಭೀಮಣ್ಣ,ಮಲ್ಲು,ವಿಜಯಕುಮಾರ,ಬಾಲರಾಜ,ವಾಸಿಂ ಅಕ್ರಂ,ಸಂಜೀವಕುಮಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here