ನನ್ನ ಮಣ್ಣು ನನ್ನ ದೇಶ ಅಭಿಮಾನ ಸರ್ವರಿಗೂ ಸಲ್ಲಬೇಕು

0
12

ಶಹಾಬಾದ: ದೆಹಲಿಯ ಕರ್ತವ್ಯ ಪಥದಲ್ಲಿ ಹುತಾತ್ಮರ ಗೌರವಾರ್ಥ ನಿರ್ಮಾಣವಾಗಲಿರುವ ಅಮೃತ ಉದ್ಯಾನವನ ಸ್ಥಳಕ್ಕೆ ನನ್ನ ಮಣ್ಣು ನನ್ನ ದೇಶ ಅಭಿಯಾನದ ಮೂಲಕ ಭಾರತದ ಪ್ರತಿ ಹಳ್ಳಿಯಿಂದ ಮಣ್ಣನ್ನು ಸಂಗ್ರಹಿಸಿ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ. ನನ್ನ ಮಣ್ಣು ನನ್ನ ದೇಶ ಎಂಬ ಅಭಿಮಾನ ಸರ್ವರಿಗೂ ಸಲ್ಲಬೇಕು ಎಂದು ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ ಹೇಳಿದರು.

ಅವರು ಗುರುವಾರ ನಗರಸಭೆಯ ಮುಂಭಾಗದಲ್ಲಿ ಆಯೋಜಿಸಲಾದ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಳಸಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ನಮ್ಮ ಊರಿನ ಮಣ್ಣು ರಾಷ್ಟ್ರದ ರಾಜಧಾನಿಯಲ್ಲಿ ನಿರ್ಮಾಣಗೊಳ್ಳಲಿರುವ ಅಮೃತ ಉದ್ಯಾನವನ ಸ್ಥಳಕ್ಕೆ ಹೋಗುತ್ತಿರುವುದು ನಮ್ಮ ಊರಿನ ಎಲ್ಲರಿಗೂ ಸಂತಷದ ವಿಷಯವಾಗಿದೆ ಎಂದರು.

ನಗರಸಭೆಯ ಪರಿಸರ ಅಭಿಯಂತರ ಅಭಯಕುಮಾರ ಮಾತನಾಡಿ, ನನ್ನ ಮಣ್ಣು ನನ್ನ ದೇಶ’ ಅಭಿಯಾನವನ್ನು ದೇಶದ ಅಮೃತ ಮಹೋತ್ಸವದ ಅಂಗವಾಗಿ ವರ್ಷ ಪೂರ್ತಿ ಹಲವಾರು ಕಾರ್ಯಕ್ರಮಗಳ ಜೊತೆ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಂಗವಾಗಿ ಮಣ್ಣನ್ನು ಸಂಗ್ರಹಿಸಿ, ದೇಶದ ಏಕತೆಯನ್ನು ಸಾರುವ ಅಮೃತ ಉದ್ಯಾನದ ನಿರ್ಮಾಣಕ್ಕೆ ಬಳಕೆಗೆ ಮಾಡಲಾಗುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಷಯ.ಇದರಿಂದ ಭಾವನಾತ್ಮಕವಾಗಿ ದೇಶದ ಬಗ್ಗೆ ಇರುವ ಭಕ್ತಿ ಗಟ್ಟಿಗೊಳ್ಳುತ್ತದೆ ಎಂದರು.

ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಮಾತನಾಡಿ, ಅಮೃತ್ ಮಹೋತ್ಸವ ಈ ಹೊತ್ತಿನಲ್ಲಿ ದೇಶದ ಸರ್ವತೋಮುಖ ಬೆಳವಣಿಗೆಗೆ ನಾವೆಲ್ಲರೂ ಟೊಂಕಕಟ್ಟಿ ಕೆಲಸ ಮಾಡಬೇಕು. ಅದೇ ರೀತಿ ದೇಶದ ಸುರಕ್ಷತೆಗೆ ಹೆಚ್ಚು ಒತ್ತು ನೀಡುವ ಕಾರ್ಯ ಆಗಬೇಕು.ಗಡಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ಸೈನಿಕರ ಮೇಲೆ ಗೌರವ ಭಾವನೆ ಮೂಡಬೇಕು. ಈ ದಿಸೆಯಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ತಾಪಂ ಇಓ ಮಲ್ಲಿನಾಥ ರಾವೂರ, ಡಾ.ರಶೀದ್ ಮರ್ಚಂಟ್,ನಗರಸಭೆಯ ಸದಸ್ಯರಾದ ಮಲ್ಲಿಕಾರ್ಜುನ ವಾಲಿ,ಸಾಬೇರಾಬೇಗಂ,ಶರಣು ಪಗಲಾಪೂರ, ಸಿದ್ರಾಮ ಕುಸಾಳೆ, ವ್ಯವಸ್ಥಾಪಕ ಶರಣಗೌಡ ಪಾಟೀಲ, ಜೆಇಗಳಾದ ರಬ್ಬಾನಿ, ಸಿದ್ದಪ್ಪ ಸೋಮಪೂರೆ, ಕಂದಾಯ ನಿರೀಕ್ಷಕ ಸುರೇಶ, ಸಮುದಾಯ ಸಂಘಟನಾಧಿಕಾರಿ ರಘುನಾಥ ನರಸಾಳೆ, ನಾರಾಯಣ ರೆಡ್ಡಿ, ಆರೋಗ್ಯ ನಿರಕ್ಷಕರಾದ ಶಿವರಾಜ ಕುಮಾರ,ಮಹ್ಮದ್ ಮೈಹಿನೋದ್ದಿನ್, ಶಿವಾನಂದ ದ್ಯಾಮಗೊಂಡ, ಕರ ವಸೂಲಿಗಾರರು ಸೇರಿದಂತೆ ಪೌರಕಾರ್ಮಿಕರು ಹಾಜರಿದ್ದರು.

ಕಳಸಾ ಯಾತ್ರೆಯ ನಿಮಿತ್ತ ಕಳಸದಲ್ಲಿ ಮಣ್ಣ ಮತ್ತು ಅಕ್ಕಿಯನ್ನು ಹಾಕಲಾಯಿತು.ನಂತರ ನಗರದ ಮುಖ್ಯ ರಸ್ತೆಗಳಲ್ಲಿ ಜಾಥಾ ಕೈಗೊಳ್ಳಲಾಯಿತು. ಈ ನೆಲದ ಸಂಸ್ಕೃತಿಯ ಪಸರಿಸುವ ನಿಟ್ಟಿನಲ್ಲಿ ನಗರಸಭೆಯ ಎಲ್ಲಾ ಸಿಬ್ಬಂದಿ ವರ್ಗದವರು ಗ್ರಾಮೀಣ ಖಾದಿ ಉಡುಗೆ ತೊಡಿಗೆಗಳನ್ನು ಧರಿಸಿಕೊಂಡರೆ, ಮಹಿಳಾ ಪೌರಕಾರ್ಮಿಕರು ಇಲ್‍ಕಲ್ ಸೀರೆ ಧರಿಸಿದ್ದು ವಿಶೇಷವಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here