ಸುರಪುರ: ನೀತಿ ಸಂಹಿತೆ ಉಲ್ಲಂಘನೆ 7 ಪ್ರಕರಣಗಳ ದಾಖಲಿಸಿದ ಚುನಾವಣಾಧಿಕಾರಿ

0
13

ಸುರಪುರ: ಮೇ7 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಕಳೆದ ಒಂದು ವಾರದಲ್ಲಿ 7 ಪ್ರಕರಣಗಳನ್ನು ದಾಖಲಿಸಲಾಗಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸುರಪುರ ವಿ.ಸ ಉಪ ಚುನಾವಣೆ ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ ಅವರು,ಏಪ್ರಿಲ್ 15 ರಂದು ಒಂದು ಸಮುದಾಯದ ಪೂಜ್ಯರಿಗೆ ಸಾಮಾಜಿಕ ಜಾಲತಾಣದಲ್ಲಿ ತೇಜೊವಧೆ ಮಾಡಿರುವುದರ ಜೊತೆಗೆ ಚುನಾವಣಾ ಕಾಲದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗುವ ಕಾರಣಕ್ಕೆ ಕ್ಷಿಪ್ರ ಸಂಚಾರಿದಳ-10 ತಂಡವು ತನಿಖೆ ನಡೆಸಿ ನೀಡಿದ ವರದಿ ಆಧಾರದ ಮೇಲೆ ನಾಗರಾಜ ಎನ್ನುವವರ ವಿರುದ್ಧ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಏಪ್ರಿಲ್ 19 ರಂದು ಪರವಾನಿಗೆ ಪಡೆಯದೆ 4 ವಾಹನಗಳು ಕಾಂಗ್ರೆಸ್ ಪಕ್ಷದ ಧ್ವಜಗಳನ್ನು ಕಟ್ಟಿಕೊಂಡು ಹೋಗುತ್ತಿರುವ ಕುರಿತು ದೂರು ಬಂದ ಕಾರಣ ಕ್ಷೀಪ್ರ ಸಂಚಾರಿ ದಳ-3 ತಂಡವು ತನಿಖೆ ಕೈಗೊಂಡು ಎರಡು ಮೋಟರ್ ಸೈಕಲ್,ಎರಡು ಕ್ರೂಷರ್ ವಾಹನಗಳ ಮೇಲೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Contact Your\'s Advertisement; 9902492681

ಏಪ್ರಿಲ್ 23 ರಂದು ಪರವಾನಿಗೆ ಪಡೆಯದೆ 2 ವಾಹನಗಳಲ್ಲಿ ಒಂದು ಮೋಟರ್ ಸೈಕಲ್ ಮತ್ತೊಂದು ಟ್ರ್ಯಾಕ್ಟರ್ ಗೆ ಬಿಜೆಪಿ ಪಕ್ಷದ ಧ್ವಜಗಳನ್ನು ಕಟ್ಟಿಕೊಂಡು ಹೋಗುತ್ತಿದ್ದ ಬಗ್ಗೆ ದೂರು ಬಂದ ಕಾರಣ,ದೂರಿನ ಕುರಿತು ಕ್ಷೀಪ್ರ ಸಂಚಾರಿ ದಳ-6 ತಂಡವು ತನಿಖೆ ನಡೆಸಿ ವರದಿ ನೀಡಿದ್ದು ಪರವಾನಿಗೆ ಪಡೆಯದೆ ಧ್ವಜಗಳನ್ನು ಕಟ್ಟಿಕೊಂಡು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದರ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here